ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಆರ್: ಆಕಾಂಕ್ಷಿ ಮಾಜಿ ಸಂಸದರ ಭೇಟಿ

Last Updated 3 ಜುಲೈ 2012, 5:40 IST
ಅಕ್ಷರ ಗಾತ್ರ

ಕಾರಟಗಿ: ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಆರ್ ಪಕ್ಷದ ಸ್ಫರ್ಧಾಕಾಂಕ್ಷಿ ರಾಜಶೇಖರ್ ರಾಠೋಡ ಪಕ್ಷದ ಕೋರ ಕಮಿಟಿ ಸದಸ್ಯ, ಮಾಜಿ ಸಂಸದ ಕೆ. ವಿರುಪಾಕ್ಷಪ್ಪ ಅವರನ್ನು ಭಾನುವಾರ ಭೇಟಿಯಾಗಿ ಚರ್ಚಿಸಿದರು.

ಪಕ್ಷದ ಸಂಘಟನೆಯಲ್ಲಿ ತೊಡಗಿರುವ ತಾವುಗಳು ನಿಮ್ಮ ಆಭಿಪ್ರಾಯವನ್ನು ಪಕ್ಷದ ವೇದಿಕೆಯಲ್ಲಿ ಮಂಡಿಸಿ, ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಕೆ. ವಿರುಪಾಕ್ಷಪ್ಪ ಸಕಾರಾತ್ಮಕವಾಗಿ ಸ್ಪಂದಿಸಿದರು.

ಮೂಲತಃ ಬಿಜಾಪೂರ ಜಿಲ್ಲೆಯವರಾದ ರಾಠೋಡ ಕಳೆದ ಏಳೆಂಟು ವರ್ಷಗಳಿಂದ ಗಂಗಾವತಿ ತಾಲ್ಲೂಕು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಲಂಬಾಣಿ ಜನಾಂಗದ  ಯುವಕರಾಗಿರುವ ರಾಠೋಡ ಮಾತನಾಡಿ, ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿರುವೆನು.

ಅನೇಕ ಗ್ರಾಮಗಳಲ್ಲಿ ಅನೇಕ ರೈತರೊಂದಿಗೆ ಒಡನಾಟ ಇದೆ. ತಾವು ಸ್ಫರ್ಧಾಕಾಂಕ್ಷಿ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಸಂಚರಿಸುವುದಾಗಿ ತಿಳಿಸಿದರು.

ಉದ್ಯಮಿ ಕೆ. ವೆಂಕಟರೆಡ್ಡಿ, ಪ್ರಮುಖರಾದ ಬೂದಿ ಗಿರಿಯಪ್ಪ, ದಶರಥರೆಡ್ಡಿ, ಊದ ಶರಣಪ್ಪ, ಸಾಲಗುಂದಿ   ಅಮರೇಶ್, ಮಲ್ಲಿಕಾರ್ಜುನ ಸಿದ್ದಾಪೂರ, ರಾಜಶೇಖರ್ ಸಿದ್ದಾಪೂರ, ಮಲ್ಲಿಕಾರ್ಜುನ ಬಿ ಮೊದಲಾದವರು ಅವರೊಂದಿಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT