ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ವಿಚಾರ ವರಿಷ್ಠರ ತೀರ್ಮಾನಕ್ಕೆ ಈಶ್ವರಪ್ಪ

Last Updated 1 ಜುಲೈ 2013, 19:59 IST
ಅಕ್ಷರ ಗಾತ್ರ

ಗುಲ್ಬರ್ಗ: `ಯಡಿಯೂರಪ್ಪ ಬಿಜೆಪಿಗೆ ಬರುವುದು, ಬಿಡುವುದು ನನಗೆ ಗೊತ್ತಿಲ್ಲ. ಅದು ಕೇಂದ್ರದ ನಾಯಕರಿಗೆ ಬಿಟ್ಟ ವಿಚಾರ' ಎಂದು ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿದರು.

ಸೂಪರ್ ಮಾರ್ಕೆಟ್‌ನಲ್ಲಿರುವ ಎಚ್‌ಕೆಸಿಸಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪಕ್ಷದ ಸಮಾಲೋಚನಾ ಹಾಗೂ ಸಂಘಟನಾ ಸಭೆಯಲ್ಲಿ ಅವರು ಮಾತನಾಡಿದರು.

`ಚುನಾವಣೆ ರಾಜಕಾರಣದ ಒಂದು ಭಾಗ. ಸೋತಿದ್ದೇವೆ ಎಂದು ರಾಜಕೀಯದಿಂದ ವಿಮುಖರಾಗಬಾರದು. 1985ರಲ್ಲಿ ಬಿಜೆಪಿ ಕೇವಲ 2 ಕಡೆ ಗೆದ್ದಿತ್ತು. ಈಗ ದೊಡ್ಡಪಕ್ಷವಾಗಿ ಬೆಳೆದಿದೆ. ಲೋಕಸಭೆ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸೋಣ' ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.

`ಕಾಂಗ್ರೆಸ್ ಸರ್ಕಾರ ಇನ್ನೂ ಮಧುಚಂದ್ರದ ಅವಧಿಯಲ್ಲಿದೆ. ನಾವು ಈಗಲೇ ಟೀಕಿಸುವುದಿಲ್ಲ. 3 ತಿಂಗಳು ಸರ್ಕಾರ ನಡೆಸಲಿ. ಆರಂಭದಲ್ಲೇ ಹೆಚ್ಚಿನ ಮದ್ಯದಂಗಡಿಗಳಿಗೆ ಪರವಾನಗಿ, ಅಗ್ಗದ ಮದ್ಯ ಮಾರಾಟದಂಥ ಯೋಜನೆಗೆ ಕೈ ಹಾಕಿರುವ ಸಿದ್ದರಾಮಯ್ಯ ಸರ್ಕಾರ ತಪ್ಪು ಮಾಡುತ್ತಿದೆ ಎಂದು ಕೆಲ ಕಾಂಗ್ರೆಸ್ಸಿಗರು ಹಾಗೂ ಮಠಾಧೀಶರೇ ಟೀಕಿಸುತ್ತಿದ್ದಾರೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT