ನವದೆಹಲಿ (ಪಿಟಿಐ): ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಭಾರಿಸಿರುವ ಕಾರಣ ಈ ವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ದಾಖಲೆ ಏರಿಕೆ ಕಾಣಬಹುದು ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.
‘ಮತಗಟ್ಟೆ ಸಮೀಕ್ಷೆಯಲ್ಲಿ ‘ಬಿಜೆಪಿ’ ಜಯದ ಸಾಧ್ಯತೆ ಹೊರಬಿದ್ದಾಗಲೇ ಸೂಚ್ಯಂಕ 21 ಸಾವಿರ ಅಂಶಗಳ ಗಡಿ ದಾಟಿತ್ತು. ಈಗ ಜಯ ಖಚಿತವಾಗಿರುವ ಹಿನ್ನೆಲೆಯಲ್ಲಿ ಅಲ್ಪಾವಧಿಯಲ್ಲಿ ಇದು ಷೇರುಪೇಟೆಗೆ ದೊಡ್ಡ ಪ್ರಮಾಣದಲ್ಲಿ ಉತ್ತೇಜನ ನೀಡಲಿದೆ. ‘ಗುಜರಾತ್ ಮಾದರಿ ಆರ್ಥಿಕ ಅಭಿವೃದ್ಧಿ’ ಬಗ್ಗೆ ಹೂಡಿಕೆದಾರರು ಕೂಡ ವಿಶ್ವಾಸ ಹೊಂದಿದ್ದಾರೆ’ ಎಂದು ಆಶಿಕಾ ಸ್ಟಾಕ್ ಬ್ರೊಕರ್ಸ್ ಸಂಸ್ಥೆ ಮುಖ್ಯಸ್ಥ ಪರಾಸ್ ಭೊತ್ರಾ ಅಭಿಪ್ರಾಯಪಟ್ಟಿದ್ದಾರೆ.
‘ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷದ ಜಯ ಷೇರುಪೇಟೆ ವಹಿವಾಟು ನಿರ್ಧರಿಸುವುದಿಲ್ಲ. ಹೂಡಿಕೆದಾರರಿಗೆ ಬೇಕಿರುವುದು ಸ್ಥಿರ ಸರ್ಕಾರ. ಈಗಿರುವ ಸರ್ಕಾರ ಕೈಗೆತ್ತಿಕೊಂಡಿರುವ ಆರ್ಥಿಕ ಸುಧಾರಣಾ ಕ್ರಮಗಳು ಮಂದಗತಿಯ ಲ್ಲಿವೆ ಎಂಬ ಆರೋಪ ಪ್ರಮುಖವಾ ಗಿದೆ’ ಎಂದು ಇನಾಂ ಫೈನಾನ್ಷಿಯಲ್ಸ್ನ ವಲ್ಲಭ್ ಬನ್ಸಾಲಿ ಹೇಳಿದ್ದಾರೆ.
ಅಕ್ಟೋಬರ್ನಲ್ಲಿನ ಕೈಗಾರಿಕಾ ಪ್ರಗತಿ ಸೂಚ್ಯಂಕ(ಐಐಪಿ), ಗ್ರಾಹಕ ಬೆಲೆ ಸೂಚ್ಯಂಕ(ಸಿಪಿಐ) ಆಧರಿಸಿದ ಹಣದು ಬ್ಬರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಡಿ. 18ರಂದು ಪ್ರಕ ಟಿಸಲಿರುವ ಹಣಕಾಸು ನೀತಿ ಕೂಡ ಷೇರುಪೇಟೆ ವಹಿವಾಟಿನ ಗತಿ ನಿರ್ಧರಿಸ ಲಿವೆ ಎಂದು ಆಗ್ಮೆಂಟ್ ಫೈನಾನ್ಷಿಯಲ್ ಸರ್ವಿಸಸ್ ‘ಸಿಇಒ’ ಗಜೇಂದ್ರ ನಾಗ್ ಪಾಲ್ ಅಭಿಪ್ರಾಯಪಟ್ಟಿದ್ದಾರೆ.