ಈಗಾಗಲೇ ಭೂಮಿ ಹೊಂದಿದ್ದವರಿಗೂ ಮತ್ತು ಅನೇಕ ವರ್ಷಗಳ ಹಿಂದೆ ಭೂಮಿ ಮಂಜೂರಾದವರಿಗೂ ಮತ್ತೆ ಭೂಮಿ ಮಂಜೂರಾಗಿದೆ ಎಂದು ತಾ.ಪಂ. ಮಾಜಿ ಸದಸ್ಯ ಕೆ.ಸಿ.ಧರಣೇಂದ್ರ ಆರೋಪಿಸಿದಾಗ ಮೋಟಮ್ಮ ಮೇಲಿನ ಸಲಹೆ ನೀಡಿದರು.
`ಮತದಾರರ ಜೊತೆ ಮಾತುಕತೆ~ ಕಾರ್ಯಕ್ರಮದಲ್ಲಿ ಹಣಕ್ಕಾಗಿ ಮತ ಹಾಕದಂತೆ ಜನರ ಮನವೊಲಿಸಬೇಕಾಗಿದೆ. ಜೊತೆಗೆ ಭ್ರಷ್ಟರು, ಸ್ವಜನಪಕ್ಷಪಾತಿಗಳು ಎಂದಿಗೂ ಚುನಾ ವಣೆಯಲ್ಲಿ ಗೆಲ್ಲದಂತೆ ಜಾಗೃತ ಮತದಾನ ಮಾಡುವಂತೆ ಮತದಾರರಲ್ಲಿ ಮನವಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಕಳಸ ಹೋಬಳಿಯ ರಸ್ತೆಗಳ ಸ್ಥಿತಿ ಹದಗೆಟ್ಟಿದೆ ಮತ್ತು ಕಳೆದ ಮೂರು ವರ್ಷದಿಂದ ಯಾವುದೇ ವಸತಿ ಯೋಜನೆಯಲ್ಲಿ ಮನೆ ಬಿಡುಗಡೆಯಾಗಿಲ್ಲ ಎಂದು ಕೆ.ಸಿ.ಧರಣೇಂದ್ರ ಗಮನ ಸೆಳೆದರು. ಹಂತಹಂತವಾಗಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕು ಎಂದು ಎನ್.ಎಂ.ಹರ್ಷ ಅಭಿಪ್ರಾಯಪಟ್ಟರು.
ರಾಜ್ಯ ಸಭೆ ಮಾಜಿ ಸದಸ್ಯೆ ಬಿಂಬಾರಾಯ್ಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್, ಹೋಬಳಿ ಅಧ್ಯಕ್ಷ ವರ್ಧಮಾನಯ್ಯ, ಮುಖಂಡ ರಾದ ಮಾರ್ಟಿನ್ ಡಿಸೋಜ, ಶುಕೂರ್, ಫಾತಿಮಾ ರೆಹಮಾನ್, ಉಮಾದೇವಿ, ರಾಮಚಂದ್ರಯ್ಯ, ಗ್ರಾ.ಪಂ. ಸದಸ್ಯರಾದ ಅನಿಲ್ ಡಿಸೋಜ, ಶಾಹುಲ್, ರತ್ನಮ್ಮ ಶೆಟ್ಟಿ, ಸಂತೋಷ್ ಇದ್ದರು.