ಸೋರಿಕೆ, ಕಲಬೆರಕೆ ಹಾಗೂ ಅದಕ್ಷತೆಗಳಿಂದಾಗಿ ಈ ಯೋಜನೆಗಳು ಅನುಪಯುಕ್ತವಾಗಿವೆ. ಇದನ್ನು ಸರಿಪಡಿಸಲೆಂದೆ ಇನ್ಫೋಸಿಸ್ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಅವರ ಅಧ್ಯಕ್ಷತೆಯಲ್ಲಿ ಹಣಕಾಸು, ರಾಸಾಯನಿಕ ಗೊಬ್ಬರ, ಕೃಷಿ, ಆಹಾರ, ಪೆಟ್ರೋಲಿಯಂ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳ ಕಾರ್ಯದರ್ಶಿಗಳನ್ನೊಳಗೊಂಡ ಕಾರ್ಯಪಡೆಯನ್ನು ಸರ್ಕಾರ ರಚಿಸಿದೆ.