ಆರಂಭದಲ್ಲಿ ಕಟ್ಟಡ ಸದ್ಬಳಕೆ ಯಾಗಿದ್ದರೂ ನಂತರದ ವರ್ಷಗಳಲ್ಲಿ ಇದು ನಿರುಪಯುಕ್ತವಾಗಿತ್ತು. ಪ್ರಸ್ತುತ ಈ ಕಟ್ಟಡಕ್ಕೆ ಜೀವಕಳೆ ಬಂದಿದೆ. ₨ 5 ಲಕ್ಷ ವೆಚ್ಚದಲ್ಲಿ ಇದನ್ನು ನವೀಕರಣಗೊಳಿಸಿ, ಹಿಂಭಾಗದಲ್ಲಿ ಅಡುಗೆಕೋಣೆ, ಊಟದ ಕೋಣೆ, ಶೌಚಾಲಯ ನಿರ್ಮಿಸಲಾಗಿದೆ. ಬಂಡಲ ಶಾಲೆಗೆ ಬರುವ 5ರಿಂದ 10ನೇ ತರಗತಿ ವರೆಗಿನ 42 ಬಾಲಕಿಯರಿಗೆ ಇಲ್ಲಿ ವಸತಿಗೆ ಅವಕಾಶ ಒದಗಿಸಲಾಗಿದೆ. ಈ ವಸತಿನಿಲಯವನ್ನು ಶಾಸಕ ವಿಶ್ವೇಶ್ವರ ಹೆಗಡೆ ಮಂಗಳವಾರ ಉದ್ಘಾಟಿಸಿದರು.
ಇ–ಗೋಡೆಯಲ್ಲಿ ಮಾಹಿತಿ: ತಾಲ್ಲೂಕಿನಲ್ಲಿ ಪ್ರಥಮವಾಗಿ ಬಂಡಲ ಗ್ರಾಮ ಪಂಚಾಯ್ತಿಯಲ್ಲಿ ಇ–ಗೋಡೆ ಸೌಲಭ್ಯ ಪ್ರಾರಂಭಿಸಲಾಗಿದೆ. ಸರ್ಕಾರಿ ಯೋಜನೆಗಳ ವಿವರ, ಫಲಾನುಭವಿಗಳ ಆಯ್ಕೆ ಪಟ್ಟಿ, ನರೇಗಾ ಕಾಮಗಾರಿ ಕುರಿತ ಎಲ್ಲ ರೀತಿಯ ವಿವರಗಳನ್ನು ಸಾರ್ವಜನಿಕರು ಕಂಪ್ಯೂಟರ್ ಪರದೆಯ ಮೇಲೆ ವೀಕ್ಷಿಸಬಹುದು. ₨ 50,000 ವೆಚ್ಚದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.
ಬಂಡಲ ಸರ್ಕಾರಿ ಪ್ರೌಢಶಾಲೆಯಲ್ಲಿ ₨ 10,000 ವೆಚ್ಚದಲ್ಲಿ ಸ್ವಾಮಿ ವಿವೇಕಾನಂದ ಸಭಾಭವನ ನಿರ್ಮಿಸ ಲಾಗಿದೆ. ಇ–ಗೋಡೆ ಸೌಲಭ್ಯ ಹಾಗೂ ಸಭಾಭವನವನ್ನು ಶಾಸಕರು ಉದ್ಘಾಟಿಸಿ ದರು. ಈ ಸಂದರ್ಭದಲ್ಲಿ ಅವರು ಬಡಗಿಯಲ್ಲಿ ನಿರ್ಮಿಸಲಿರುವ ₨ 10.5 ಲಕ್ಷ ವೆಚ್ಚದ ಸಭಾಭವನ, ₨ 20 ಲಕ್ಷ ಮೊತ್ತದ ಖೂರ್ಸೆ ಗ್ರಾಮದ ಕುಡಿ ಯುವ ನೀರು ಸರಬರಾಜು ಯೋಜನೆಗೆ ಗುದ್ದಲಿಪೂಜೆ ನೆರವೇರಿಸಿದರು.