ಊಟ ಸೇವಿಸಿದ ಸ್ವಲ್ಪ ಹೊತ್ತಿನ ನಂತರ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡಿದ್ದು, ಇದರಿಂದ ಉಳಿದ ಮಕ್ಕಳು ಆತಂಕದಲ್ಲಿದ್ದರು. ಅಸ್ವಸ್ಥರಾದ ಮಕ್ಕಳನ್ನು ಸ್ಥಳೀಯ ಖಾಸಗಿ ನರ್ಸಿಂಗ್ಹೋಂನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ನಿರಂಜನ್, ರಕ್ಷಿತಾ, ಪ್ರದೀಪ್, ತನುಜಾ ಎಂಬ ವಿದ್ಯಾರ್ಥಿಗಳನ್ನು ಮಂಡ್ಯದ ಆಸ್ಪತ್ರೆಗೆ ಹಾಗೂ ಜಯಲಕ್ಷ್ಮಿ, ಸತೀಶ್, ಸೋನಾ, ಸಿದ್ದರಾಜು, ಅಮೃತ ಎಂಬುವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.