ನವದೆಹಲಿ: ಶಾಲೆಗಳಲ್ಲಿ ಜಾರಿಯಲ್ಲಿರುವ ಮಧ್ಯಾಹ್ನದ ಊಟದ ಯೋಜನೆಗೆ ನೀಡಲಾಗುತ್ತಿರುವ ಸಬ್ಸಿಡಿ ಸಹಿತದ ಎಲ್ಪಿಜಿ ಸಿಲಿಂಡರ್ ನೀಡುವುದನ್ನು ಮುಂದುವರಿಸಬೇಕು ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ಸಚಿವ ಕಪಿಲ್ ಸಿಬಲ್ ಅವರು ಪೆಟ್ರೋಲಿಯಂ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.
ಈ ಯೋಜನೆಗೂ ಸಬ್ಸಿಡಿ ಸಿಲಿಂಡರ್ ಮಿತಿ ಹೇರಿದರೆ ತೊಂದರೆಯಾಗುತ್ತದೆ ಮತ್ತು ಯೋಜನೆ ಮುಂದುವರಿಸುವುದೇ ಕಷ್ಟವಾಗುತ್ತದೆ ಎಂದು ವಿವರಿಸಿದ್ದಾರೆ.
ಪ್ರಮುಖ ಕಟ್ಟಡಗಳ ಸ್ಫೋಟ ಬೆದರಿಕೆ
ಮುಂಬೈ (ಪಿಟಿಐ): `ಮುಂಬೈ ಹಾಗೂ ನಾಗಪುರದ ಪ್ರಮುಖ ಕಟ್ಟಡಗಳಲ್ಲಿ ಬಾಂಬ್ ಸ್ಫೋಟಿಸಲಾಗುವುದು~ ಎಂದು ಇಲ್ಲಿನ ಸಚಿವಾಲಯಕ್ಕೆ ಅನಾಮಧೇಯ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಗುರುವಾರ ಎರಡೂ ನಗರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು.
`ಸ್ವಲ್ಪ ಸಮಯದ ಇದು ಬಳಿಕ ಹುಸಿ ಬಾಂಬ್ ಪತ್ರವೆಂದು ತಿಳಿಯಿತು. ಆದರೆ ಯಾವುದನ್ನೂ ಲಘುವಾಗಿ ಪರಿಗಣಿಸುವಂತಿಲ್ಲ~ ಎಂದು ಪೊಲೀಸರು ತಿಳಿಸಿದ್ದಾರೆ.