ಮುಂಬೈ (ಪಿಟಿಐ): ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಬಿಹಾರದ ವಲಸಿಗರ ಮೇಲೆ ಮತ್ತೆ ಕಿಡಿಕಾರಿದ್ದು, ದೆಹಲಿಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಬಿಹಾರಿ ವಲಸಿಗರೇ ಕಾರಣರಾಗಿದ್ದಾರೆ ಎಂದು ಟೀಕಿಸಿದ್ದಾರೆ.
`ದೇಶವನ್ನೇ ತಲ್ಲಣಗೊಳಿಸಿದ ಈ ಘಟನೆಯ ಕುರಿತು ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ, ಅತ್ಯಾಚಾರ ಎಸಗಿದವರು ಎಲ್ಲಿಯವರು ಎಂದು ಯಾರೂ ಕೇಳುತ್ತಿಲ್ಲ. ಆರೋಪಿಗಳೆಲ್ಲರೂ ಬಿಹಾರಕ್ಕೆ ಸೇರಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಂಡನೆ: ಅಪರಾಧ ಪ್ರಕರಣಗಳಿಗೆಲ್ಲ ಬಿಹಾರಿ ವಲಸಿಗರತ್ತ ಬೊಟ್ಟು ಮಾಡುವುದು ಠಾಕ್ರೆ ಕುಟುಂಬಕ್ಕೆ ಅಭ್ಯಾಸವಾಗಿದೆ ಎಂದು ಆರ್ಜೆಡಿಯ ಲಾಲು ಪ್ರಸಾದ್ ಖಂಡಿಸಿದ್ದಾರೆ.