ಚೀಣಾ ಮತ್ತೆ ದಾಳಿ ಮಾಡಿದರೆ ಹಿಮ್ಮೆಟ್ಟಿಸುವುದು ಖಚಿತ
ನವದೆಹಲಿ, ಡಿ. 11 - `ಚೀಣಾದ ಬೆದರಿಕೆಗಳಿಗೆ ಭಾರತವು ಜಗ್ಗುವುದಿಲ್ಲ. ಹೊಸ ದಾಳಿ ಏನಾದರೂ ನಡೆದರೆ ಚೀಣೀಯರನ್ನು ಯಶಸ್ವಿಯಗಿ ಹಿಂದಕ್ಕಟ್ಟುತ್ತೇವೆ' ಎಂದು ಪ್ರಧಾನ ಮಂತ್ರಿ ನೆಹರೂರವರು ನಿನ್ನೆ ಘೋಷಿಸಿದರು.
`ಕಡು ಬಡವ'
ದೆಹಲಿ, ಡಿ. 11 - ತಮ್ಮ 50 ಲಕ್ಷ ರೂಪಾಯಿ ವಾರ್ಷಿಕ ರಾಜಧನದಲ್ಲಿ ರಾಷ್ಟ್ರೀಯ ರಕ್ಷಣಾ ನಿಧಿಗೆ ತಾವು ಕಾಣಿಕೆ ನೀಡಲು `ನಾನು ಕಡು ಬಡವ' ಎಂಬುದಾಗಿ ಹೈದರಾಬಾದಿನ ನಿಜಾಮರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಎಲ್ಲ ಮಾಜಿ ರಾಜ ಮಹಾರಾಜರೂ ತಮ್ಮ ರಾಜಧನದಲ್ಲಿ ಶೇಕಡ 10 ರಷ್ಟನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ಕೊಡ ಬೇಕೆಂದು ಕೇಂದ್ರ ಸರ್ಕಾರ ಪ್ರಾರ್ಥಿಸಿತ್ತು.