ರಾಜ್ಯದಲ್ಲಿ 62-63 ರಲ್ಲೂ ನೀರಾವರಿ ಬಾವಿ ಯೋಜನೆ
ಬೆಂಗಳೂರು, ಜ. 17 - ಸಣ್ಣ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ `ಉತ್ತಮವಾಗಿ ಕೆಲಸ ಮಾಡುತ್ತಿರುವ ಮೈಸೂರು ರಾಜ್ಯದಲ್ಲಿ~ 62-63 ರಲ್ಲೂ ನೀರಾವರಿ ಬಾವಿಗಳಿಗೆ ಹಣ ಒದಗಿಸುವ ವಿಶೇಷ ಯೋಜನೆ ಮುಂದುವರಿಯುವುದೆಂಬ ಭರವಸೆಯನ್ನು ಕೇಂದ್ರದ ವ್ಯವಸಾಯ ಶಾಖೆ ಉಪಸಚಿವ ಶ್ರೀ ಎಂ. ವಿ. ಕೃಷ್ಣಪ್ಪನವರು ಇಲ್ಲಿ ನೀಡಿದರು.
ಶ್ರೀ ವಿ. ಎಸ್. ಕೃಷ್ಣಯ್ಯರ್ ಹೊಸ ಮೇಯರ್
ಬೆಂಗಳೂರು, ಜ. 17 - 37 ವರ್ಷ ವಯಸ್ಸಿನ ಹಳೆಯ ಹಾಗೂ ಜನಪ್ರಿಯ ಕಾಂಗ್ರೆಸ್ ಕಾರ್ಯಕರ್ತರಾದ ಶ್ರೀ ವಿ. ಎಸ್. ಕೃಷ್ಣಯ್ಯರ್ ಅವರು ಇಂದು 11 ಕಾಂಗ್ರೆಸ್ಸೇತರ ವೋಟುಗಳೊಡನೆ 59 ಮತಗಳಿಸಿ ನಗರದ ನೂತನ `ಪ್ರಥಮ ಪ್ರಜೆ~ ಯಾಗಿ ಆಯ್ಕೆಯಾದರು.