ಭಾರತದ ಆಡಳಿತ ಪುನಃಸ್ಥಾಪನೆ
ಬೊಮ್ಡಿಲಾ, ಡಿ. 18 - `ನೀಫಾ' ಪ್ರದೇಶದಲ್ಲಿ ಚೀಣೀ ಆಕ್ರಮಣಕಾರರು ತೆರವು ಮಾಡಿದ ಪ್ರದೇಶದಲ್ಲಿ ಭಾರತದ ಆಡಳಿತ ಪುನಃಸ್ಥಾಪನೆ ಗುರುತಾಗಿ ಕಾಮೆಂಗ್ ವಿಭಾಗದ ಬೊಮ್ಡಿಲಾದಲ್ಲಿ ನಿನ್ನೆ ಪ್ರಾತಃಕಾಲ ಭಾರತೀಯ ಧ್ವಜವನ್ನು ಹಾರಿಸಲಾಯಿತು.
ಡೆಕ್ಕನ್ ಹೆರಾಲ್ಡ್- ಪ್ರಜಾವಾಣಿ ಯೋಧರ ನಿಧಿ ಅರ್ಪಣೆ
ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ ಸಂಸ್ಥೆಯು `ಯೋಧರ ನಿಧಿ'ಗಾಗಿ ಸಂಗ್ರಹಿಸಿದ್ದ 2,75101 ರೂಪಾಯಿಗಳ ಮೊತ್ತದ ಚೆಕ್ಕನ್ನು ಪತ್ರಿಕೆಗಳ ವ್ಯವಸ್ಥಾಪಕ ಸಂಪಾದಕರಾದ ಶ್ರೀ ಕೆ. ಎ. ನೆಟ್ಟಕಲ್ಲಪ್ಪನವರು ಸೋಮವಾರ ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಪಂಡಿತ್ ನೆಹರೂ ಅವರಿಗೆ ಅರ್ಪಿಸಿದರು.