ಹಿಂದುಳಿದಿರುವಿಕೆ ಗೀಳಿಗೆ ಗಂಟು ಬೀಳುವುದು ಬೇಡ
ಬೆಂಗಳೂರು, ಸೆ. 20 - ಒಕ್ಕಲಿಗ ಜನಾಂಗದವರು ಜೀವನದಲ್ಲಿ ಕೆಲವು ಅವಕಾಶಗಳನ್ನು ಪಡೆಯಲು ಹಿಂದುಳಿದಿರುವಿಕೆಯ ಗೀಳಿಗೆ ಅಂಟಿಕೊಳ್ಳದೆ ಸ್ವಸಾಮರ್ಥ್ಯದಿಂದ ಮುಂದುವರಿದ ಜನಾಂಗಗಳ ಮಟ್ಟಕ್ಕೆ ಬರಲು ಪ್ರಯತ್ನಿಸಬೇಕೆಂದು ಕಾಫಿ ಬೋರ್ಡಿನ ಅಧ್ಯಕ್ಷ ಶ್ರೀ ಸೀತಾರಾಮರೆಡ್ಡಿಯವರು ಇಂದು ಇಲ್ಲಿ ಕರೆ ನೀಡಿದರು.
ನಿಶ್ಯಸ್ತ್ರೀಕರಣ ಚರ್ಚೆಗೆ ನಿರ್ದೇಶಕರ ತತ್ವಗಳು
ವಿಶ್ವರಾಷ್ಟ್ರಸಂಸ್ಥೆ, ಸೆ. 20 - ನಿಶ್ಯಸ್ತ್ರೀಕರಣ ಸಂಧಾನಕ್ಕೆ ನಿರ್ದೇಶಕರಾಗಲು ಎಂಟು ತತ್ವಗಳ ಜಂಟಿ ಘೋಷಣೆಯೊಂದನ್ನು ಅಮೆರಿಕ ಮತ್ತು ರಷ್ಯಗಳು ಇಂದು ವಿಶ್ವರಾಷ್ಟ್ರ ಸಂಸ್ಥೆಗೆ ಸಲ್ಲಿಸಿದರು.