ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 23-5-1962

Last Updated 22 ಮೇ 2012, 19:30 IST
ಅಕ್ಷರ ಗಾತ್ರ

ಭಾರತ ರಾಯಭಾರಿ ಶಾಖೆ ವಿರುದ್ಧ ನಿರ್ಬಂಧಗಳು
ನವದೆಹಲಿ, ಮೇ 22
- ಚೀಣಾ ಮತ್ತು ಟಿಬೆಟ್‌ಗಳಲ್ಲಿ ಭಾರತದ ರಾಯಭಾರಿ ಶಾಖೆಗಳ ಕಾರ್ಯದ ವಿರುದ್ಧ ಕಠಿಣವಾದ ನಿರ್ಬಂಧಗಳು ಮುಂದುವರಿಯುತ್ತದೆ ಎಂದು ಭಾರತದ ವಿದೇಶಾಂಗ ಉಪಸಚಿವೆ ಶ್ರೀಮತಿ ಲಕ್ಷ್ಮಿ ಮೆನನ್ ಇಂದು ಲೋಕ ಸಭೆಯಲ್ಲಿ ತಿಳಿಸಿದರು.

ನೊಂದ ಮಾಲೀಕರಿಗೆ ನೆರವು
ಬೆಂಗಳೂರು, ಮೇ 22
- ರಸ್ತೆ ಸಾರಿಗೆ ರಾಷ್ಟ್ರೀಕರಣದಿಂದ ಉದ್ಯಮ ಕಳೆದುಕೊಂಡ ಖಾಸಗಿ ವಾಹನಗಳ ಮಾಲೀಕರಿಗೆ ಬೇರೆ ವೃತ್ತಿಯ ಅವಕಾಶ ಕಲ್ಪಿಸುವ ಪ್ರಶ್ನೆ ಸರ್ಕಾರದ ತೀವ್ರ ಪರಿಶೀಲನೆಯಲ್ಲಿದೆಯೆಂದು ತಿಳಿದುಬಂದಿದೆ.

ಡಿಗಾಲರ ಹತ್ಯೆಗೆ ಸಂಚು
ಪ್ಯಾರಿಸ್, ಮೇ 22
- ಅಧ್ಯಕ್ಷ ಡಿಗಾಲ್‌ರನ್ನು ಕೊಲೆಗೆ ರಹಸ್ಯ ಸೇನಾ ಸಂಸ್ಥೆಯ ಹಂತಕ ತಂಡ ನಡೆಸಿದ್ದ ಸಂಚನ್ನು ಪೋಲೀಸರು ವ್ಯರ್ಥಗೊಳಿಸಿದ್ದಾರೆ.

ಈ ತಂಡ ಕಳೆದ ವಾರ ಅಧ್ಯಕ್ಷರು ಸಂಚರಿಸಿದ್ದ ಮಧ್ಯ ಫ್ರಾನ್ಸ್ ಪ್ರದೇಶವನ್ನು ಸಂದರ್ಶಿಸಿತ್ತೆಂದೂ, ಮೊನ್ನೆ ಬೆಳಿಗ್ಗೆ ಪ್ಯಾರಿಸಿನಲ್ಲಿ ತಂಡದ ನಾಯಕ ಮತ್ತು ಇಬ್ಬರು ಸಹಾಯಕರನ್ನೂ ದಸ್ತಗಿರಿ ಮಾಡಿರುವುದಾಗಿಯೂ ಪೋಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT