`ಕಾಂಗ್ರೆಸ್ಸನ್ನು ಮತ್ತೆ ಅಧಿಕಾರಕ್ಕೆ ತನ್ನಿ~
ಕಟಕ್, ಜ. 3 - ಗೋವಾದಲ್ಲಿ ಭಾರತ ಸರ್ಕಾರದ ಕ್ರಮದ ಬಗ್ಗೆ ಜಗತ್ತಿನ ಟೀಕೆಗಳಿಗೆ ಪರಿಣಾಮಕಾರೀ ಉತ್ತರವೆಂದರೆ ಅಲ್ಲಿನ ಕ್ರಮಕ್ಕೆ ಜನರ ಬೆಂಬಲವನ್ನು ಪ್ರದರ್ಶಿಸುವುದೇ ಎಂದು ಪ್ರಧಾನಿ ನೆಹರೂ ಇಲ್ಲಿ ಬಹಿರಂಗ ಸಭೆಯಲ್ಲಿ ಘೋಷಿಸಿದರು.
ಶರಾವತಿ 2ನೇ ಹಂತಕ್ಕೆ 23.80ಕೋಟಿ ಮಂಜೂರು
ಬೆಂಗಳೂರು, ಜ. 3 - 23.80 ಕೋಟಿ ರೂಪಾಯಿ ಅಂದಾಜು ಖರ್ಚಿನ, ಶರಾವತಿ ವಿದ್ಯುತ್ ಯೋಜನೆಯ ದ್ವಿತೀಯ ಘಟ್ಟದ ಯೋಜನೆಯನ್ನು ಇಂದು ನಡೆದ ಮಂತ್ರಿಮಂಡಲದ ಸಭೆ ಮಂಜೂರು ಮಾಡಿತೆಂದು ತಿಳಿದು ಬಂದಿದೆ.