ಸ್ವತಂತ್ರ ಆಲ್ಜಿರಿಯ ಉದಯ
ಪ್ಯಾರಿಸ್, ಜುಲೈ 3 - ಫ್ರಾನ್ಸಿನ ಅಧ್ಯಕ್ಷ ಡಿಗಾಲ್ ಅವರು ಆಲ್ಜಿರಿಯದ ಸ್ವಾತಂತ್ರ್ಯವನ್ನು ಇಲ್ಲಿ ಇಂದು ಔಪಚಾರಿಕವಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ಅವರು ಸಂದೇಶವೊಂದನ್ನು ಹೊರಡಿಸಿ, ಆಲ್ಜಿರಿಯದ ಸ್ವಾತಂತ್ರ್ಯಕ್ಕೆ ಫ್ರಾನ್ಸ್ ಮನ್ನಣೆ ನೀಡುವುದೆಂದು ಫ್ರೆಂಚ್ ಗಣರಾಜ್ಯದ ಅಧ್ಯಕ್ಷರು ಘೋಷಿಸುವುದಾಗಿ ತಿಳಿಸಿದ್ದಾರೆ.
ಮೂಗಿಗಿಂತ ಮೂಗುತಿ ಭಾರ
ಬೆಂಗಳೂರು, ಜುಲೈ 3 - ಹೆಚ್ಚು ಸಿಬ್ಬಂದಿಯ ನೇಮಕವನ್ನು ನಿವಾರಿಸುವ ಹಾಗೂ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಲೆಕ್ಕಾಚಾರ ಮಾಡುವ ಯಂತ್ರ ವ್ಯವಸ್ಥೆಯನ್ನು ಸ್ಥಾಪಿಸುವ ಕಾರಣವಾಗಿ ಭದ್ರಾವತಿಯಲ್ಲಿರುವ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ 157 ಲಕ್ಷ ರೂ. ನಷ್ಟ ಸಂಭವಿಸಿತೆಂದು ರಾಜ್ಯ ಸರ್ಕಾರದ 1960-61ನೆ ವರ್ಷದ ಲೆಕ್ಕ ಪರಿಶೋಧನೆ ವರದಿ ತಿಳಿಸಿದೆ.
`ಭಾರತಕ್ಕೆ ನೆರವು ನಿಲ್ಲಿಸುವ ಸುದ್ದಿ ಸುಳ್ಳು~
ಲಂಡನ್, ಜುಲೈ 3 - ಭಾರತಕ್ಕೆ ನೆರವು ನೀಡುವ ರಾಷ್ಟ್ರಗಳ ಸಂಘವು ಅಮೆರಿಕದ ಒತ್ತಾಯಕ್ಕೆ ಮಣಿದು ಭಾರತಕ್ಕೆ ನೆರವು ನೀಡುವುದನ್ನು ನಿಲ್ಲಿಸಲು ನಿರ್ಧರಿಸಿದೆಯೆಂಬ ವರದಿಗಳಲ್ಲಿ ಸತ್ಯಾಂಶವೇನೂ ಇಲ್ಲವೆಂದು ಭಾರತದ ಹಣಕಾಸಿನ ಮಂತ್ರಿ ಶ್ರೀ ಮೊರಾರ್ಜಿ ದೇಸಾಯಿ ಅವರು ಇಂದು ಇಲ್ಲಿ ತಿಳಿಸಿದರು.