ಕಾಂಗ್ರೆಸ್ಸಿಗರ ಒಗ್ಗಟ್ಟಿಗೆ ಕರೆ
ಮಧುರೆ, ಅ. 4 - ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲೆಗ ಕಾಂಗ್ರೆಸ್ಸಿಗರು ತಮ್ಮ ಭಿನ್ನಾಭಿಪ್ರಾಯಗಳನ್ನು ತೊಡೆದು ಹಾಕಿ, ಮಹಾಚುನಾವಣೆಯಲ್ಲಿ ಒಗ್ಗಟ್ಟಿನಿಂದ ನಿಲ್ಲಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ಎನ್. ಸಂಜೀವರೆಡ್ಡಿ ಇಂದು ಕರೆ ನೀಡಿದರು.
ಹೆಚ್ಚಿನ ಹಣದ ಕೊರತೆ
ಬೆಂಗಳೂರು, ಅ. 4 - ಸರ್ಕಾರಿ ನೌಕರರ ಸಂಬಳ ಸಾರಿಗೆಯ ಪುನರ್ ವಿಮರ್ಶೆ, ಪಾನನಿರೋಧದಿಂದಾಗಿ ರಾಜ್ಯದ ತೃತೀಯ ಪಂಚವಾರ್ಷಿಕ ಯೋಜನೆಗೆ ಒದಗಿಸಲು ಉಂಟಾಗುವ ಹೆಚ್ಚಿನ ಕೊರತೆಯನ್ನು ಸರಿದೂಗಿಸಲು `ಹೆಚ್ಚು ತೆರಿಗೆ ವಿಧಿಸ ಬೇಕಾಗುವುದು~ ಎಂದು ಅರ್ಥ ಸಚಿವ ಟಿ. ಮರಿಯಪ್ಪ ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.