27 ಪ್ರಮಾಣಿತ ಎಕರೆ ಪರಿಮಿತಿಗೆ ಕಾಂಗ್ರೆಸ್ ಪಕ್ಷದ ಒಪ್ಪಿಗೆ
ಬೆಂಗಳೂರು, ಸೆ. 6 - ಭೂ ಹಿಡುವಳಿ ಪರಿಮಿತಿ 27 ಎಕರೆಗಳಿರಬೇಕೆಂದು ಸೆಲೆಕ್ಟ್ ಸಮಿತಿ ಮಾಡಿರುವ ಶಿಫಾರಸನ್ನು ಇಂದು ವಿಧಾನ ಮಂಡಲದ ಕಾಂಗ್ರೆಸ್ ಪಕ್ಷ ಅಂಗೀಕರಿಸಿತು. ಮುಂದೆ ಜಮೀನನ್ನು ಸ್ವಾಧೀನಕ್ಕೆ ಪರಿಮಿತಿ 18 ಎಕರೆಗಳಿರಬೇಕೆಂದು ತೀರ್ಮಾನ ಕೈಗೊಂಡಿದೆ.
ಮಾಸ್ಟರ್ ತಾರಾಸಿಂಗರ ಸ್ಥಿತಿ ಮತ್ತೂ ಕಳವಳ
ಅಮೃತಸರ, ಸೆ. 6 - ಉಪವಾಸದ 23ನೇ ದಿನವಾದ ಇಂದು ಮಾಸ್ಟರ್ ತಾರಾಸಿಂಗ್ರ ಕಳವಳಕರ ಪರಿಸ್ಥಿತಿ ಮತ್ತಷ್ಟು ಕಳವಳಕಾರಿಯಾಗಿದೆಯೆಂದು ವೈದ್ಯರ ಪ್ರಕಟಣೆ ತಿಳಿಸಿದೆ.
ಅವರ ದೌರ್ಬಲ್ಯ ಇಂದು ಇನ್ನೂ ಹೆಚ್ಚಿದೆ. ಕಳೆದ ರಾತ್ರಿ ಕೊಂಚ ಕೊಂಚವಾಗಿ ಒಟ್ಟು 2 ಗಂಟೆ ಕಾಲ ಮಾತ್ರ ನಿದ್ರಿಸಿದರು.