`ಕ್ಷಮಾದಾನದ ಅರ್ಜಿ ಬಗ್ಗೆ ತೀರ್ಮಾನ ವಿಳಂಬವಾಗಿರುವುದರಿಂದಾಗಿ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕೆಂದು ಬುಲ್ಲರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರಿಂ ಕೋರ್ಟ್ ತಳ್ಳಿಹಾಕಿತ್ತು. `ಶಿಕ್ಷೆಯ ಪ್ರಮಾಣ ಇಳಿಸಲು ಅರ್ಜಿದಾರರು ನೀಡಿರುವ ಕಾರಣವು ಸಮರ್ಥನೀಯವಲ್ಲ' ಎಂದು ಹೇಳಿ, ದೇವಿಂದರ್ ಸಿಂಗ್ ಬುಲ್ಲರ್ಗೆ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ಕೋರ್ಟ್ ಕಾಯಂ ಗೊಳಿಸಿತ್ತು.