ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಮೂವರು ಸಮುದ್ರಪಾಲು

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಂಕೋಲಾ (ಉ.ಕ.ಜಿಲ್ಲೆ): ಇಲ್ಲಿಗೆ ಸಮೀಪದ ಹೊನ್ನಿಬೈಲ್ ಕಡಲ ತೀರದ ಹನಿಬೀಚ್ ರೆಸಾರ್ಟ್ ಬಳಿ ಸಮುದ್ರದಲ್ಲಿ ಆಕಸ್ಮಿಕವಾಗಿ ಮುಳುಗಿ ಮೂವರು ನಾಪತ್ತೆಯಾದ ಘಟನೆ ಶುಕ್ರವಾರ ಸಂಭವಿಸಿದೆ.

ಇವರನ್ನು ಬೆಂಗಳೂರು ವೈಟ್‌ಫೀಲ್ಡ್ ಮತ್ತು ತಿಪ್ಪಸಂದ್ರದ ಅಮಿತ್ ವಿಷ್ಣುಕುಮಾರ ಮರಾರ್ಕ್ (35), ಪ್ರವೀಣ ನೆವಿತಾ (35) ಮತ್ತು ಇವರ ಪತ್ನಿ ಸಂಜಲಿ (30) ಎಂದು ಗುರುತಿಸಲಾಗಿದೆ.

ಇವರು ಕಾರಿನಲ್ಲಿ ಶುಕ್ರವಾರ ಬೆಳಿಗ್ಗೆ ಆಗಮಿಸಿ ರೆಸಾರ್ಟ್‌ನಲ್ಲಿ ತಂಗಿದ್ದರು. ಶುಕ್ರವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಡಲ ತೀರದ ಇಳಿಜಾರಿನಲ್ಲಿರುವ ಬಂಡೆಯ ಮೇಲೆ ನಿಂತುಕೊಂಡಿದ್ದ ಇವರು ಅಲೆಗಳು ಅಪ್ಪಳಿಸಿದ್ದರಿಂದ  ಕೊಚ್ಚಿ ಹೋಗಿರಬಹುದೆಂದು ಶಂಕಿಸಲಾಗಿದೆ. 

ದುರ್ಘಟನೆಯಲ್ಲಿ ಅಮಿತ್ ಅವರ ಪತ್ನಿ ದಿವ್ಯಾ ಮತ್ತು ಪ್ರವೀಣ-ಸಂಜಲಿ ದಂಪತಿ  ಪುತ್ರಿ ಮೂರು ವರ್ಷದ ಅನುಷ್ಕಾ ಬದುಕುಳಿದಿದ್ದಾರೆ.

ಅಗ್ನಿಶಾಮಕ ದಳ, ಕೋಸ್ಟ್    ಗಾರ್ಡ್  ಸಿಬ್ಬಂದಿ ಶವಗಳ ಪತ್ತೆ ಕಾರ್ಯದಲ್ಲಿ ಸ್ಥಳೀಯ ಪೊಲೀಸರಿಗೆ ನೆರವಾಗುತ್ತಿದ್ದಾರೆ. 

ಸಂಜೆಯವರೆಗೆ ಶವಗಳು ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT