ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ತಾಲ್ಲೂಕುಗಳ ಪಂಚಾಯಿತಿ ಕ್ಷೇತ್ರಗಳಲ್ಲಿ ಖಾಲಿಯಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ದೊಡ್ಡಬಳ್ಳಾಪುರ ತಾಲ್ಲೂಕು ಆರೂಡಿ ಗ್ರಾಮ ಪಂಚಾಯ್ತಿಯ ಆರೂಡಿ ಕ್ಷೇತ್ರ 1 (ಪ.ಜಾ. ಮಹಿಳೆ), ನೆಲಮಂಗಲ ತಾಲ್ಲೂಕು ಯಂಟಗಾನಹಳ್ಳಿ ಗ್ರಾಮಪಂಚಾಯ್ತಿ ಹೊನ್ನಸಂದ್ರ ಕ್ಷೇತ್ರ 1 (ಪ.ಜಾ), ಶ್ರಿನಿವಾಸಪುರ ಗ್ರಾಮ ಪಂಚಾಯ್ತಿಯ ಮೊದಲಕೋಟೆ ಕ್ಷೇತ್ರ 1 (ಸಾಮಾನ್ಯ), ವಿಶ್ವೇಶ್ವರಪುರ ಗ್ರಾಮಪಂಚಾಯ್ತಿಯ ಹುರಳಹಳ್ಳಿ ಕ್ಷೇತ್ರ 1 (ಪ.ಜಾ.ಮಹಿಳೆ), ಹೊಸಕೋಟೆ ತಾಲ್ಲೂಕಿನ ಇಟ್ಟಸಂದ್ರ ಗ್ರಾಮಪಂಚಾಯ್ತಿಯ ಹಿಂಡಿಗನಾಳ ಕ್ಷೇತ್ರ 1 (ಸಾಮಾನ್ಯ), ನಲವಾಗಿಲು ಗ್ರಾಮಪಂಚಾಯ್ತಿಯ ತರಬಹಳ್ಳಿ ಕ್ಷೇತ್ರ 1 (ಪ.ಜಾ), ಲಕ್ಕೊಂಡಹಳ್ಳಿ ಗ್ರಾಮಪಂಚಾಯ್ತಿಯ ಲಕ್ಕೊಂಡಹಳ್ಳಿ ಕ್ಷೇತ್ರ 1 (ಸಾಮಾನ್ಯ) ಸೇರಿದಂತೆ ಖಾಲಿಯಿರುವ ಒಟ್ಟು 7 ಸದಸ್ಯ ಸ್ಥಾನಗಳಿಗೆ ಮತ್ತು ಹೊಸಕೋಟೆ ತಾಲ್ಲೂಕಿನ ಮುತ್ಸಂದ್ರ ಗ್ರಾ.ಪಂ.ಚುನಾವಣೆ ನಡೆಯಲಿದೆ.
ಚುನಾವಣಾ ವೇಳಾಪಟ್ಟಿ: ಚುನಾವಣೆಗೆ ಇದೇ 28ರೊಳಗೆ ನಾಮಪತ್ರಗಳನ್ನು ಸಲ್ಲಿಸಲು ತಿಳಿಸಲಾಗಿದೆ. ಇದೇ 29 ನಾಮಪತ್ರಗಳ ಪರಿಶೀಲನೆಗೆ ಕೊನೆಯ ದಿನ. ನಾಮಪತ್ರ ಹಿಂತೆಗೆದುಕೊಳ್ಳಲು 31ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ ಸೆಪ್ಟೆಂಬರ್ 9ರಂದು ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ. ಸೆಪ್ಟೆಂಬರ್ 12ರಂದು ಮತ ಎಣಿಕೆ ನಡೆಯಲಿದೆ.