ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು- ಚೆನ್ನೈ: ಷಟ್ಟಥ ನಿರ್ಮಾಣಕ್ಕೆ ಕೇಂದ್ರ ಅಸ್ತು

Last Updated 23 ಅಕ್ಟೋಬರ್ 2011, 19:50 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು-ಚೆನ್ನೈ ನಡುವೆ ಷಟ್ಪಥ ಎಕ್ಸ್‌ಪ್ರೆಸ್ ರಸ್ತೆ ನಿರ್ಮಾಣ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಮಾರ್ಗದಲ್ಲಿ ವಾಹನಗಳು ಗಂಟೆಗೆ 120 ಕಿ.ಮೀ. ವೇಗದಲ್ಲಿ ಚಲಿಸಬಲ್ಲವು.ಮಾರ್ಗದುದ್ದಕ್ಕೂ ಎರಡೂ ಬದಿ ತಡೆಗೋಡೆ ಹೊಂದಿದ ಇಂತಹ ರಸ್ತೆ ರಾಷ್ಟ್ರದಲ್ಲಿ ಇದೇ ಮೊದಲಾಗಲಿದೆ.

ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ-ನಿರ್ವಹಣೆ-ಹಸ್ತಾಂತರ (ಬಿಒಟಿ) ಕರಾರಿನಡಿ ಇದು ನಿರ್ಮಾಣವಾಗಲಿದೆ. ಬೆಂಗಳೂರು ಬಳಿಯ ಹೊಸಕೋಟೆ ಆರಂಭವಾಗಲಿರುವ ಇದು ಕೋಲಾರ, ಪಲಮನೇರು, ಆಂಧ್ರದ ಚಿತ್ತೂರು, ರಾಣಿಪೇಟ್ ಮೂಲಕ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಮಾನಾಂತರವಾಗಿ ಹಾದುಹೋಗಲಿದೆ.

ಈ ರಸ್ತೆ ಹಾದು ಹೋಗುವ ಉದ್ದ ಕರ್ನಾಟಕದಲ್ಲಿ 74 ಕಿ.ಮೀ, ಆಂಧ್ರದಲ್ಲಿ 90 ಹಾಗೂ ತಮಿಳುನಾಡಿನಲ್ಲಿ 94 ಕಿ.ಮೀ ಇರಲಿದೆ.

ಪ್ರತಿ ಕಿ.ಮೀ ರಸ್ತೆ ನಿರ್ಮಾಣಕ್ಕೆ 18ರಿಂದ 20 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ನಡೆಸುವ ಸಲುವಾಗಿ ಮೂರು ತಿಂಗಳೊಳಗೆ ಎಕ್ಸ್‌ಪ್ರೆಸ್ ಮಾರ್ಗ ಪ್ರಾಧಿಕಾರ ರಚಿಸಲು ಸಚಿವಾಲಯ ಚಿಂತಿಸುತ್ತಿದೆ.

2012ರ ಆರಂಭದಲ್ಲಿ ಈ ಕಾಮಗಾರಿ ಶುರುವಾಗಲಿದ್ದು, ನಂತರದ ಮೂರ‌್ನಾಲ್ಕು ವರ್ಷಗಳಲ್ಲಿ ಪೂರ್ಣವಾಗುವ ನಿರೀಕ್ಷೆ ಇದೆ. ಈ ಮಾರ್ಗದಲ್ಲಿ ಬೆಂಗಳೂರು- ಚೆನ್ನೈ ಪ್ರಯಾಣ ಅವಧಿ 3 ಗಂಟೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT