ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬೆಳಕಿಂಡಿ

Last Updated 9 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

-ಬಸವನಗುಡಿ ಬಳಿ ಇರುವ ಬ್ಯೂಗಲ್ ರಾಕ್ ಕೆಂಪೇಗೌಡರ ಕಾಲದಲ್ಲಿ ನಿರ್ಮಾಣಗೊಂಡ ಕಹಳೇ ಬಂಡೆ. ಈಗದು ಆಕರ್ಷಕ ಉದ್ಯಾನ. ಕನ್ನಡ ಭಾಷೆಗೆ ಜ್ಞಾನಪೀಠ ಗೌರವ ತಂದುಕೊಟ್ಟ ಎಲ್ಲಾ ಬರಹಗಾರರ ಪ್ರತಿಮೆಗಳು ಇರುವುದು ಈ ಉದ್ಯಾನದ ವಿಶೇಷ.

-ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿದ್ದ ಕೈದಿಗಳು ಹಿಂದೆ ಜೈಲಿನಲ್ಲಿದ್ದ ಪ್ರಿಂಟಿಂಗ್ ಪ್ರೆಸ್, ಲಾಲ್‌ಬಾಗ್ ತೋಟ ಹಾಗೂ ವಿಧಾನಸೌಧ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ಮಾಡುವ ಪರಿಪಾಠವಿತ್ತು.

-ಅಲಸೂರು ಕೆರೆಯ ಬಹುಭಾಗ ಈಗಲೂ ಸೇನೆ ವಶದಲ್ಲಿದೆ. ಇದರಲ್ಲಿರುವ ದ್ವೀಪ ಭಾಗದ ಸುಂದರ ಪರಿಸರದಲ್ಲಿ ಬೆಂಗಳೂರಿಗೆ ಬರುವ ವಿದೇಶಿ ಅತಿಥಿಗಳಿಗೆ ಔತಣ ನೀಡುವ ಸಮಾರಂಭಗಳು ಈಚಿನವರೆಗೂ ನಡೆಯುತ್ತಿದ್ದವು. ಈ ಸಮಾರಂಭಗಳನ್ನು ಬೆಂಗಳೂರು ನಗರ ಪಾಲಿಕೆಯೇ ಏರ್ಪಡಿಸುತ್ತಿತ್ತು.

-ಬೆಂಗಳೂರಿನಲ್ಲಿ ಮಹಾರಾಣಿಯವರ ಕಾಲೇಜು 1939 ರಲ್ಲಿ ಆರಂಭವಾಯಿತು.

-ಛತ್ರಪತಿ ಶಿವಾಜಿಯ ಎರಡನೇ ಮದುವೆ ಸಾಯಿಬಾಯಿ ನಿಂಬಾಳ್ಕರ್ ಅವರೊಂದಿಗೆ ಜರುಗಿದ್ದು ಬೆಂಗಳೂರಿನಲ್ಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT