-ಬಸವನಗುಡಿ ಬಳಿ ಇರುವ ಬ್ಯೂಗಲ್ ರಾಕ್ ಕೆಂಪೇಗೌಡರ ಕಾಲದಲ್ಲಿ ನಿರ್ಮಾಣಗೊಂಡ ಕಹಳೇ ಬಂಡೆ. ಈಗದು ಆಕರ್ಷಕ ಉದ್ಯಾನ. ಕನ್ನಡ ಭಾಷೆಗೆ ಜ್ಞಾನಪೀಠ ಗೌರವ ತಂದುಕೊಟ್ಟ ಎಲ್ಲಾ ಬರಹಗಾರರ ಪ್ರತಿಮೆಗಳು ಇರುವುದು ಈ ಉದ್ಯಾನದ ವಿಶೇಷ.
-ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿದ್ದ ಕೈದಿಗಳು ಹಿಂದೆ ಜೈಲಿನಲ್ಲಿದ್ದ ಪ್ರಿಂಟಿಂಗ್ ಪ್ರೆಸ್, ಲಾಲ್ಬಾಗ್ ತೋಟ ಹಾಗೂ ವಿಧಾನಸೌಧ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸ ಮಾಡುವ ಪರಿಪಾಠವಿತ್ತು.
-ಅಲಸೂರು ಕೆರೆಯ ಬಹುಭಾಗ ಈಗಲೂ ಸೇನೆ ವಶದಲ್ಲಿದೆ. ಇದರಲ್ಲಿರುವ ದ್ವೀಪ ಭಾಗದ ಸುಂದರ ಪರಿಸರದಲ್ಲಿ ಬೆಂಗಳೂರಿಗೆ ಬರುವ ವಿದೇಶಿ ಅತಿಥಿಗಳಿಗೆ ಔತಣ ನೀಡುವ ಸಮಾರಂಭಗಳು ಈಚಿನವರೆಗೂ ನಡೆಯುತ್ತಿದ್ದವು. ಈ ಸಮಾರಂಭಗಳನ್ನು ಬೆಂಗಳೂರು ನಗರ ಪಾಲಿಕೆಯೇ ಏರ್ಪಡಿಸುತ್ತಿತ್ತು.
-ಬೆಂಗಳೂರಿನಲ್ಲಿ ಮಹಾರಾಣಿಯವರ ಕಾಲೇಜು 1939 ರಲ್ಲಿ ಆರಂಭವಾಯಿತು.
-ಛತ್ರಪತಿ ಶಿವಾಜಿಯ ಎರಡನೇ ಮದುವೆ ಸಾಯಿಬಾಯಿ ನಿಂಬಾಳ್ಕರ್ ಅವರೊಂದಿಗೆ ಜರುಗಿದ್ದು ಬೆಂಗಳೂರಿನಲ್ಲಿ.