ಚೆನ್ನೈ: ಬೆಂಗಳೂರು ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ `ಗೂಂಡಾ ಕಾಯ್ದೆ' ಅಡಿ ಬಂಧನಕ್ಕೊಳಗಾಗಿ ತಮಿಳುನಾಡಿನ ಸಲೇಂ ಕೇಂದ್ರ ಕಾರಾಗೃಹದಲ್ಲಿದ್ದ ಸಲೀಂ ಎಂಬುವವನ್ನು ಕರ್ನಾಟಕ ಪೊಲೀಸರು ಗುರುವಾರ ವಿಚಾರಣೆ ನಡೆಸಿದರು.
ಸಲೀಂ, ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಅಲ್-ಉಮ್ಮಾ ಸಂಘಟನೆಯ ಕಾರ್ಯಕರ್ತ ಆರೋಪಿ ಕಿಚನ್ ಬಹುರಿಯಾ ಸಂಬಂಧಿ. ಪೊಲೀಸ್ ಅಧಿಕಾರಿಗಳ ಪ್ರಕಾರ, ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಂಧಿಸಲಾಗಿಲ್ಲ.
ಈ ನಡುವೆ ರಹಸ್ಯವಾಗಿ ಆಸ್ಟ್ರೇಲಿಯಾಕ್ಕೆ ವಲಸೆ ಹೊರಟಿದ್ದ ತಮಿಳುನಾಡಿನ 67 ಶ್ರೀಲಂಕಾ ತಮಿಳು ನಿರಾಶಿತರನ್ನು ಬುಧವಾರ ರಾತ್ರಿ ಮಂಗಳೂರಿನಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕರ್ನಾಟಕ ಪೊಲೀಸರು ನೀಡಿದ ಮಾಹಿತಿ ಆಧರಿಸಿ, ತಮಿಳುನಾಡಿನ ಅಪರಾಧ ವಿಭಾಗದ ಪೊಲೀಸರು ಮಂಗಳೂರಿಗೆ ಆಗಮಿಸಿ, ಪೊಲೀಸರಿಂದ ವಿವರಣೆ ಪಡೆದಿದ್ದಾರೆ.