ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟದಲ್ಲಿ ನೀರಿನ ಸೆಲೆ: ಸಂತಸ

Last Updated 12 ಸೆಪ್ಟೆಂಬರ್ 2013, 8:01 IST
ಅಕ್ಷರ ಗಾತ್ರ

ಹನುಮಸಾಗರ: ನಾಲ್ಕಾರು ವರ್ಷ­ಗಳಿಂದ ಈ ಭಾಗದಲ್ಲಿ ಅಂತರ್ಜಲ ಕುಸಿತಗೊಂಡಿದ್ದರಿಂದ ಜನತೆ ಕುಡಿ­ಯುವ ನೀರಿಗೆ ತೀವ್ರ ತೊಂದರೆ ಎದುರಿಸುತ್ತಿದ್ದರು. ಆದರೆ ಮೂರು ದಿನಗಳ ಹಿಂದೆ ಬಿದ್ದ ಭಾರಿ ಮಳೆಗೆ ವೆಂಕಟೇಶ್ವರ ಕೆರೆ ತುಂಬಿದ್ದು, ಗ್ರಾಮದ ಕೊಳವೆ ಬಾವಿಗಳಲ್ಲಿ ನೀರು ತುಂಬಿದೆ.

ಈ ಬೆಟ್ಟದ ಮೂಲೆಯೊಂದರಲ್ಲಿ ಹೆಚ್ಚು ಮಳೆಯಾದರೆ ಸಹಜವಾಗಿ  ಬರುವ ಈ ನೀರಿಗೆ ಸ್ಥಳೀಯರು ಆನೆ ಊಟಿ ಎಂದು ಕರೆಯುತ್ತಾರೆ.  ಎಂಟು ವರ್ಷಗಳ ಅವಧಿಯಲ್ಲಿ ಇದೆ ಪ್ರಥಮ ಬಾರಿಗೆ ಈ ನೀರಿನ ಸೆಲೆ ಬಂದಿದೆ.

ಆದರೆ ಈ ಸೆಲೆ ನೀರು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬರಬೇಕಾದರೆ ಹೆಚ್ಚಿನ ಮಳೆ ಅವಶ್ಯವಾಗಿದೆ, ಹೆಚ್ಚು ಮಳೆಯಾದರೆ ಈ ನೀರು ಆನೆಯ ಸೊಂಡಿಲು ತರಹ ಬೀಳುವುದರಿಂದ ಜನರು ಆನೆ ಊಟಿ(ಸೆಲೆ) ಎಂದು ಹೇಳುತ್ತಾರೆ.

ಒಂದು ಬಾರಿ ಈ ರೀತಿ ಊಟಿ ಕಿತ್ತಿ ಬಂದರೆ ನಮ್ಮ ಭಾಗದ ಕರೆ ತುಂಬಿಕೊಂಡು ಅಂತರ್ಜಲ ಭರ್ತಿ­ಯಾಗುತ್ತವೆ ಎಂದು ಸುರೇಶಬಾಬು ಜಮಖಂಡಿಕರ ಹೇಳುತ್ತಾರೆ.

ನೀರಿಗಾಗಿ ತತ್ತರಿಸಿ ಹೋಗಿದ್ದ ಇಲ್ಲಿನ ಜನರು ಸೊಗಸಾಗಿ ಹಳ್ಳದ ರೀತಿಯಲ್ಲಿ ಹರಿದು ಬರುತ್ತಿದ್ದ  ನೀರು  ಸಂತಸ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT