ಮಡಿವಾಳದ ಮಾರುಕಟ್ಟೆ ರಸ್ತೆಯಲ್ಲಿ ಮಂಗಳವಾರ ಮುಸ್ಸಂಜೆ ಹೊತ್ತು. ಕೆಳಗೆ ಹಾಳಾಗಿದ್ದ ರಸ್ತೆಯಲ್ಲಿ ವಾಹನಗಳ ಓಡಾಟದಿಂದ ದೂಳು ಮೇಲೆದ್ದರೆ, ಮೇಲೆ ಮರದ ಕೊಂಬೆಗಳ ನಡುವಿನಿಂದ ಸೂರ್ಯನ ಕಿರಣಗಳು ನುಸುಳಿ ಆ ರಸ್ತೆಗೆ ಮುತ್ತಿಕ್ಕುತ್ತಿದ್ದವು. ದೂಳುಮಯ ಆಗಿದ್ದ ಈ ವಾತಾವರಣ ವಾಹನ ಸವಾರರಿಗೆ ಸಂಕಷ್ಟ ತಂದರೂ ದೂರದಿಂದ ನೋಡುತ್ತಿದ್ದವರಿಗೆ ಅಲ್ಲಿನ ನೋಟ ಒಂದು ಕಲಾಕೃತಿಯಂತೆ ಗೋಚರಿಸಿತು ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ್