ಯಲಹಂಕ ಪೊಲೀಸ್ ಠಾಣೆಯಿಂದ ಅಲ್ಲಾಳಸಂದ್ರ ರೈಲ್ವೆ ಸೇತುವೆವರೆಗೂ ಅಳವಡಿಸಿರುವ ಬೀದಿದೀಪಗಳು ಬೆಳಕು ಚೆಲ್ಲುವುದನ್ನೇ ಮರೆತಿವೆ. ಇದರಿಂದ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಾಗುವಾಗ ಮುಂದೆ ಏನಿದೆ ಎಂಬುದನ್ನು ತಿಳಿಯಲು ಆಗುತ್ತಿಲ್ಲ.
ಪ್ರಾಣಾಪಾಯದ ಆತಂಕ ಎದುರಾಗಿದೆ. ಅಧಿಕಾರಿಗಳು ಆದಷ್ಟು ಬೇಗ ಸಮಸ್ಯೆ ಪರಿಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು.