ಹವ್ಯಾಸಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಇವರು `ಕಾಡು' ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರು. `ಅಬಚೂರಿನ ಪೋಸ್ಟಾಫೀಸ್' ಸೇರಿದಂತೆ ಅನೇಕ ಕಲಾತ್ಮಕ ಚಿತ್ರಗಳಲ್ಲಿ ಅಭಿನಯಿಸಿದ ರಮೇಶ್ ಭಟ್ ಅವರು ಶಂಕರನಾಗ್ ಒಡನಾಡಿಯಾಗಿ ರಂಗಭೂಮಿ, ಚಿತ್ರರಂಗ ಹಾಗೂ ಕಿರುತೆರೆಗಳಲ್ಲಿ ತೆರೆಯ ಮುಂದೆ ಹಾಗೂ ಹಿಂದೆ ತಮ್ಮನ್ನು ತಾವು ತೊಡಗಿಸಿಕೊಂಡರು.
ನಟನೆಯಷ್ಟೇ ಅಲ್ಲದೆ ಇವರು ನಿರ್ದೇಶನವನ್ನೂ ಮಾಡಿದ್ದಾರೆ. `ಪರಮೇಶಿ ಪ್ರೇಮ ಪ್ರಸಂಗ' ಇವರ ನಿರ್ದೇಶನದ ಚಿತ್ರ. `ನಿಷ್ಕರ್ಷ' ಚಿತ್ರದ ನಟನೆ ಬಹುತೇಕರಿಗೆ ಮೆಚ್ಚುಗೆಯಾಯಿತು. `ಕ್ರೇಜಿ ಕರ್ನಲ್' ಧಾರಾವಾಹಿ ಹೆಚ್ಚು ಜನಪ್ರಿಯತೆ ಪಡೆಯಿತು.