ಅರಸೀಕೆರೆ: ಕೆಲಸ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಪಟ್ಟಣದಲ್ಲಿ ಗ್ರಾಮೀಣ ಅಂಚೆ ಇಲಾಖೆ ನೌಕರರು ಅರೆಬೆತ್ತಲೆ ಮೆರವಣಿಗೆ ನಡೆಸಿದರು.
ಗ್ರಾಮೀಣ ಅಂಚೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರವೂ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ತಾಲ್ಲೂಕು ಗ್ರಾಮೀಣ ಅಂಚೆ ನೌಕರರ ಸಂಘದ ಅಧ್ಯಕ್ಷ ದಿನೇಶ್ ನೇತೃತ್ವದಲ್ಲಿ ಅಂಚೆ ನೌಕರರು ಪಟ್ಟಣದಲ್ಲಿ ಅರೆ ಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ದಿನೇಶ್ ಮಾತನಾಡಿ, ಕೇಂದ್ರ ಸರ್ಕಾರ ನ್ಯಾಯಾಧೀಶ ತಲವಾರ್ ಸಮಿತಿ ವರದಿಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಡಿ.ಎಂಕುರ್ಕೆ ಜಯಣ್ಣ, ಕಿತ್ತನಕೆರೆ ಬಸವರಾಜು, ಶಾನೇಗರೆ ನಾಗರಾಜು, ಹಾರನಹಳ್ಳಿ ರೇಣುಕಪ್ಪ, ರಾಮೇನಹಳ್ಳಿ ಭಗವಂತರಾಯ, ಹರಳಕಟ್ಟದ ಮರುಳಪ್ಪ, ಹೊಳಲ್ಕೆರೆ ಗಂಗಾಧರ್ ಪ್ರಕಾಶ್ ವಸಂತಕುಮಾರ್ ಇದ್ದರು.