ಇದರಿಂದಾಗಿ ಜಮೀನು ಮಾಲಿಕರು ಖರೀದಿ ವಿಳಂಬ ವಾಗುತ್ತಿ ರುವುದರಿಂದ ಬೇರೆಯವರಿಗೆ ಮಾರಾಟ ಮಾಡುತ್ತೇವೆಂದು ಹೇಳುತ್ತಿದ್ದಾರೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆ ಈಗಲಾದರೂ ಮನಸ್ಸು ಮಾಡಿ ನೊಂದ ಕುಟುಂಬಕ್ಕೆ ಸಹಾಯ ಮಾಡಬೇಕು. ಇಲ್ಲವಾದಲ್ಲಿ ಅನಿರ್ಧಿಷ್ಟಾವದಿ ಸತ್ಯಾಗ್ರಹ ಮುಂದುವರಿಸಲಾಗುವುದು' ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಂಗಪ್ಪ ಮಾದರ ತಹಶೀಲ್ದಾರರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.
ದೇವೆಂದ್ರಪ್ಪ ಮಾದರ, ಹನಮಂತಪ್ಪ ಕೆಳಗೇರಿ, ಶಿವರಾಯಪ್ಪ ಮಾದರ, ಶಿವಪುತ್ರಪ್ಪ ಕೆಳಗೇರಿ, ರವಿ ದೊಡ್ಡಮನಿ, ಚೆನ್ನಪ್ಪ ಚಲವಾದಿ, ಕರಿಯಪ್ಪ ದೊಡ್ಡಮನಿ, ಮಲ್ಲವ್ವ ದೊಡ್ಡಮನಿ, ರುಕ್ಮವ್ವ ದೊಡ್ಡಮನಿ, ರುಕ್ಮವ್ವ ಮಾದರ, ನೀಲಪ್ಪ ಮಾದರ, ಸಣ್ಣಕರಿಯಪ್ಪ ಮಾದರ, ನಾಗಪ್ಪ ಮಾದರ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಸತ್ಯಾಗ್ರಹ ಕೈಗೊಳ್ಳದಂತೆ ಪ್ರತಿಭಟನಾಕಾರರನ್ನು ಪಿಎಸ್ಐ ಎನ್.ಸಿ.ಕಾಡದೇವರ ಮನವೊಲಿಸಿದ ನಂತರ ಪ್ರತಿಭಟನೆ ಹಿಂತೆಗೆದುಕೊಂಡು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.