ಬೆಂಗಳೂರು: ನಗರದಲ್ಲಿ ಸೋಮವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ ಮತ್ತು ಉಮೇಶ್ ಕತ್ತಿ ಅವರ ಅನುಪಸ್ಥಿತಿ ಎದ್ದು ಕಂಡರೆ, ಮತ್ತೊಬ್ಬ ಸಚಿವ ಮುರುಗೇಶ್ ನಿರಾಣಿ ಹಾಜರಾಗಿ ಗಮನ ಸೆಳೆದರು.
`ಬೊಮ್ಮಾಯಿ ಮತ್ತು ಕತ್ತಿ ಮುಂಬೈ ಕರ್ನಾಟಕ ಭಾಗದ ನೀರಿನ ಸಮಸ್ಯೆ ಕುರಿತು ಮಹಾರಾಷ್ಟ್ರ ಸರ್ಕಾರದ ಜತೆ ಚರ್ಚಿಸಲು ಮುಂಬೈಗೆ ಹೋಗಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ತಿಳಿಸಿದರು.