ಕುಣಿಗಲ್: ಇದ್ದ ಒಂದೇ ಬೋನ್ ಬಳಸಿ ಚಿರತೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬುಧವಾರ ಯಶಸ್ವಿಯಾದರು.
ಹುಲಿಯೂರುದುರ್ಗ ಹೋಬಳಿ ಚಲಮಸಂದ್ರ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಅನೇಕ ಜಾನುವಾರುಗಳು ಬಲಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಚಲಮಸಂದ್ರ, ಹೊನ್ನಮಾಚನಹಳ್ಳಿ, ನಿಡಸಾಲೆ, ಬೀಸೆಗೌಡನದೊಡ್ಡಿ ಗ್ರಾಮಸ್ಥರು ಹುಲಿಯೂರುದುರ್ಗ ವಲಯ ಅರಣ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಚಿರತೆ ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು.
ಮಂಗಳವಾರ ಮೇಕೆಯನ್ನು ಬೋನಿಗೆ ಕಟ್ಟಿದ್ದರು. ಆಹಾರ ಅರಸಿ ಬಂದ ಚಿರತೆ, ಬೋನ್ನಲ್ಲಿ ಸಿಕ್ಕಿಬಿತ್ತು.