ಇದರಿಂದ ಎಚ್ಚೆತ್ತುಕೊಂಡ ನಾಗರಹೊಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬೆಳ್ಳಿಯಪ್ಪ, ಮತ್ತಿಗೋಡು ವಲಯ ಅರಣ್ಯಾಧಿಕಾರಿ ದೇವರಾಜು ಹುಲಿ ಸೆರೆ ಹಿಡಿಯಲು ಬೋನು ಇಟ್ಟು ಕಾಯುತ್ತಿದ್ದರು. ಎರಡೇ ದಿನಗಳಲ್ಲಿ ಹುಲಿ ಬೋನಿಗೆ ಬಿದ್ದು ಅರಣ್ಯಾಧಿಕಾರಿಗಳು ನಿಟ್ಟುಸಿರು ಬಿಡುವಂತೆ ಮಾಡಿದೆ.
ಶನಿವಾರ ರಾತ್ರಿ ಬೋನಿನ ಬಳಿ ವಲಯ ಅರಣ್ಯಾಧಿಕಾರಿಗಳಾದ ದೇವರಾಜು, ಗೋಪಾಲ, ಸಿಬ್ಬಂದಿ ಸಂಜು, ಮಾದೇಶ, ಲಿಂಗರಾಜು, ಚಿಕ್ಕಕಾಳ, ಬಸವರಾಜು ಕಾಯುತ್ತ ಕುಳಿತಿದ್ದರು. ಹುಲಿ ಬೋನಿಗೆ ಬಿದ್ದ ಸುದ್ದಿ ಕೇಳಿ ಮಧ್ಯರಾತ್ರಿಯಲ್ಲಿಯೇ ತಿತಿಮತಿ ಸುತ್ತಮುತ್ತಲಿನ ಜನತೆ ಸಾಗರದಂತೆ ಹರಿದು ಬಂದು ಹುಲಿಯನ್ನು ವೀಕ್ಷಿಸಿದರು.
ಕಳೆದ ವರ್ಷ ಕಾನೂರು ಸುತ್ತಮುತ್ತ ಒಂದು ತಿಂಗಳ ಕಾಲ 15 ಜಾನುವಾರುಗಳನ್ನು ಬಲಿತೆಗೆದುಕೊಂಡು ಸೆರೆ ಸಿಕ್ಕದೇ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಿದ್ದ ಹುಲಿ ಇದೇ ಇರಬಹುದು ಎಂದು ಶಂಕಿಸಲಾಗಿದೆ.
ಇದೀಗ ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಎರಡು ಮೂರು ತಿಂಗಳಲ್ಲಿ ಗಾಯ ವಾಸಿಯಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.