ಹಾವೇರಿ: ಬಿ.ಆರ್. ಕಿರಣ್ ಮೌಳಿ, ಸಾಹಿಲ್ ಸಿಪಾನಿ, ಅಭಿಜಿತ್ ನೈಂಪಲ್ಲಿ ಹಾಗೂ ಸುಕೇಶ ಶೆಣೈ ಗುರುವಾರ ಇಲ್ಲಿಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾದ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಪ್ರಧಾನ ಸುತ್ತಿಗೆ ಅರ್ಹತೆ ಗಿಟ್ಟಿಸಿದರು.
ಕಿರಣ್ ಮೌಳಿ 30-20ರಿಂದ ಆರ್.ಕೌಶಿಕ್ ಮೇಲೂ; ಸಾಹಿಲ್ ಸಿಪಾನಿ 30-25ರಿಂದ ಅನೂಪ್ ಕಿರಣ್ ವಿರುದ್ಧವೂ; ಸುಕೇಶ ಶೆಣೈ 30-22ರಿಂದ ಮೋಹನ್ ಲಂಗೋಟಿ ಮೇಲೂ ಜಯ ಸಾಧಿಸಿದರು. ಇತರ ಪಂದ್ಯಗಳಲ್ಲಿ ಅಭಿಜಿತ್ ನೈಂಪಲ್ಲಿ 30-10ರಿಂದ ಕೆ.ಚಂದ್ರಶೇಖರ್ ಅವರನ್ನು; ಬಿ.ಎಸ್. ಪಾಲ್ಗುಣ 30-21ರಿಂದ ಬಿ.ಪ್ರವೀಣ್ ಅವರನ್ನು; ಆಶಿಶ್ ಮೆಲ್ವಿನ್ 30-26ರಿಂದ ಅಪೂರ್ವ ದೇವರಭಾವಿ ಅವರನ್ನು ಸೋಲಿಸಿ ಪ್ರಧಾನ ಸುತ್ತಿಗೆ ಅರ್ಹತೆ ಪಡೆದರು.
ಎದುರಾಳಿ ಅಂಕಣಕ್ಕೆ ಇಳಿಯದ್ದರಿಂದ ಕಮಲ್ದೀಪ್ ಸಿಂಗ್ ಬೆವರು ಹರಿಸದೆ ಪ್ರಧಾನ ಸುತ್ತಿಗೆ ಮುನ್ನಡೆದರು. ಅರ್ಜುನ್ ಟಿ. ರಾಮ್ ಸಹ ಮುಂದಿನ ಹಂತಕ್ಕೆ ಮುನ್ನಡೆ ಪಡೆದರು.