ಬೆಂಗಳೂರು: ಅಗ್ರ ಶ್ರೇಯಾಂಕದ ಅರವಿಂದ್ ಭಟ್ ತ್ರಿ ಸ್ಟಾರ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕೆನರಾ ಯೂನಿಯನ್ ಕೋರ್ಟ್ನಲ್ಲಿ ಸೋಮವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅರವಿಂದ್ 21-15, 21-16ರಲ್ಲಿ ಆರನೇ ಶ್ರೇಯಾಂಕದ ರೋಹನ್ ಕ್ಯಾಸ್ಟಲಿನೊ ಎದುರು ಗೆಲುವು ಸಾಧಿಸಿದರು.
ಇತರ ಪಂದ್ಯಗಳಲ್ಲಿ ಹೇಮಂತ್ ಗೌಡ 21-19, 15-21, 21-18ರಲ್ಲಿ ಬಿ.ಆರ್. ಸಂಕೀರ್ತ್ ಮೇಲೂ, ಆರ್.ಎನ್. ಸೂರಜ್ 21-13, 21-16ರಲ್ಲಿ ವೆಂಕಟೇಶ್ ಪ್ರಸಾದ್ ವಿರುದ್ಧವೂ, ಎಸ್. ಅದರ್ಶ ಕುಮಾರ್ 21-11, 21-8ರಲ್ಲಿ ಕಾರ್ತಿಕ್ ಎಂ. ಮೇಲೂ ಗೆಲುವು ಸಾಧಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು.
ಮಹಿಳೆಯರ ಕ್ವಾರ್ಟರ್ ಫೈನಲ್ನಲ್ಲಿ ಜಿ.ಎಂ. ನಿಶ್ವಿತಾ 21-15, 21-13ರಲ್ಲಿ ಮೀರಾ ಮಹಾದೇವನ್ ಎದುರು ಗೆಲುವು ಪಡೆದು ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು.