ಬೆಂಗಳೂರು: ಎಂಇಜಿ ತಂಡದವರು ಇಲ್ಲಿ ನಡೆಯುತ್ತಿರುವ ಪ್ರೊ. ಎನ್.ಸಿ. ಪರಪ್ಪ ಸ್ಮಾರಕ ಟ್ರೋಫಿಗಾಗಿನ ರಾಜ್ಯ `ಎ~ ಡಿವಿಷನ್ ಬ್ಯಾಸ್ಕೆಟ್ಬಾಲ್ ಲೀಗ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಸುಲಭ ಗೆಲುವು ಪಡೆದರು.
ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್ಬಾಲ್ ಕೋರ್ಟ್ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಎಂಇಜಿ 58-29 ರಲ್ಲಿ ಎಚ್ಎಎಲ್ ತಂಡವನ್ನು ಮಣಿಸಿತು. ವಿರಾಮದ ವೇಳೆಗೆ 28-16 ರಲ್ಲಿ ಮುನ್ನಡೆ ಸಾಧಿಸಿದ್ದ ವಿಜಯಿ ತಂಡದ ಪರ ಅಭಿಷೇಕ್ (16 ಪಾಯಿಂಟ್) ಮತ್ತು ಮನು (10 ಪಾಯಿಂಟ್) ಉತ್ತಮ ಪ್ರದರ್ಶನ ನೀಡಿದರು.
ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಕೆಎಸ್ಪಿ ತಂಡ 62-59 ರಲ್ಲಿ ಕೋರಮಂಗಲ ಸ್ಪೋರ್ಟ್ಸ್ ಕ್ಲಬ್ ವಿರುದ್ಧ ಜಯ ಸಾಧಿಸಿತು. ರಾಮಕೃಷ್ಣ (26) ಅವರು ಕೆಎಸ್ಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿರಾಮದ ವೇಳೆಗೆ ವಿಜೇತ ತಂಡ 23-26 ರಲ್ಲಿ ಹಿನ್ನಡೆಯಲ್ಲಿತ್ತು.
ನವೀನ್ ತಂದಿತ್ತ 32 ಪಾಯಿಂಟ್ಗಳ ನೆರವಿನಿಂದ ಸದರ್ನ್ ಬ್ಲೂಸ್ 61-45 ರಲ್ಲಿ ಜೆಎಸ್ಸಿ ತಂಡವನ್ನು ಮಣಿಸಿತು.
ಎಎಸ್ಸಿ 56-46 ರಲ್ಲಿ ಯಂಗ್ ಓರಿಯನ್ಸ್ ವಿರುದ್ಧ ಜಯ ಗಳಿಸಿತು. ವಿರಾಮದ ವೇಳೆ ಎಎಸ್ಸಿ 25-19 ರಲ್ಲಿ ಮೇಲುಗೈ ಪಡೆದಿತ್ತು.