ಬೆಂಗಳೂರು: ಕೊನೆಯ ಪಂದ್ಯದಲ್ಲಿ ಪ್ರಭಾವಿ ಆಟವಾಡಿದ ಆತಿಥೇಯ ಎಂಎಸ್ಆರ್ಐಟಿ ತಂಡದವರು ಇಲ್ಲಿ ಕೊನೆಗೊಂಡ ಎಂ.ಎಸ್. ರಾಮಯ್ಯ ಸ್ಮಾರಕ ಅಖಿಲ ಭಾರತ ಅಂತರ ಎಂಜಿನಿಯರಿಂಗ್ ಕಾಲೇಜ್ ಬ್ಯಾಸ್ಕೆಟ್ಬಾಲ್ ಟೂರ್ನಿಯ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆದರು.
ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಎಂಎಸ್ಆರ್ಐಟಿ 39-25 ಪಾಯಿಂಟ್ಗಳಿಂದ ಮಣಿಪಾಲದ ಎಂಐಟಿ ತಂಡವನ್ನು ಸೋಲಿಸಿತು. ವಿಜಯಿ ತಂಡ ವಿರಾಮದ ವೇಳೆಗೆ 20-14ರಲ್ಲಿ ಮುನ್ನಡೆಯಲ್ಲಿತ್ತು. ನಂತರ ಪಾಯಿಂಟ್ಸ್ಗಳ ಸಂಖ್ಯೆ ಹೆಚ್ಚಿಸಿಕೊಂಡಿತು. ಆತಿಥೇಯ ತಂಡದ ವಿಜಯ್ (12) ಹಾಗೂ ಆನಂದ್ (10) ಪ್ರಭಾವಿ ಆಟವಾಡಿದರು.
ಬಾಲಕಿಯರ ವಿಭಾಗದಲ್ಲಿಯು ಮಿಂಚಿನ ಆಟವಾಡಿದ ಎಂಎಸ್ಆರ್ಐಟಿ ತಂಡದವರು ಫೈನಲ್ ಪಂದ್ಯದಲ್ಲಿ 25-21ಪಾಯಿಂಟ್ಗಳಿಂದ ಎನ್ಎಚ್ಸಿಇ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.