ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್ಪಿ) ತಂಡ ಇಲ್ಲಿ ನಡೆಯುತ್ತಿರುವ ಎನ್.ಸಿ. ಪರಪ್ಪ ಸ್ಮಾರಕ ಟ್ರೋಫಿ ರಾಜ್ಯ `ಎ~ ಡಿವಿಷನ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ 70-48 ಪಾಯಿಂಟ್ಸ್ನಿಂದ ಮಂಡ್ಯದ ವಿಬಿಸಿ ತಂಡವನ್ನು ಮಣಿಸಿತು.
ಕಂಠೀರವ ಕ್ರೀಡಾಂಗಣದಲ್ಲಿಭಾನುವಾರ ನಡೆದ ಪಂದ್ಯದಲ್ಲಿ ವಿಜಯಿ ತಂಡ ವಿರಾಮದ ವೇಳೆಗೆ 34-23ರಲ್ಲಿ ಮುನ್ನಡೆ ಸಾಧಿಸಿತ್ತು. ಈ ತಂಡದ ಸನತ್ (14) ಹಾಗೂ ಮಹೇಶ್ (13) ಪಾಯಿಂಟ್ ಕಲೆ ಹಾಕಿದರು.
ಇತರ ಪಂದ್ಯಗಳಲ್ಲಿ ವಿಜಯ ಬ್ಯಾಂಕ್ 50-42ರಲ್ಲಿ ಕೋರಮಂಗಲ ಸ್ಪೋರ್ಟ್ಸ್ ಕ್ಲಬ್ ಮೇಲೂ, ಎಂಇಜಿ 69-66ರಲ್ಲಿ ಯಂಗ್ ಓರಿಯನ್ಸ್ ವಿರುದ್ಧವೂ, ಸಿಎಂಪಿ 69-65ರಲ್ಲಿ ಎಎಸ್ಸಿ ಮೇಲೂ ಜಯ ಸಾಧಿಸಿ ಪೂರ್ಣ ಪಾಯಿಂಟ್ಸ್ ಕಲೆಹಾಕಿತು.
ಭಾನುವಾರ ನಡೆದ ಇನ್ನೊಂದು ಪಂದ್ಯದಲ್ಲಿ ಭಾರತ್ ಸ್ಪೋರ್ಟ್ಸ್ ಯೂನಿಯನ್ ಹಾಗೂ ಎಚ್ಎಎಲ್ ನಡುವಣ ಪಂದ್ಯದ ಪೂರ್ಣವಧಿ ವೇಳೆಗೆ 69-69ರಲ್ಲಿ ಸಮಬಲವಾಗಿತ್ತು. ನಂತರ ಹೆಚ್ಚುವರಿ ಸಮಯದಲ್ಲಿ ಎಚ್ಎಎಲ್ ತಂಡ 76-69ರಲ್ಲಿ ಭಾರತ್ ಕ್ಲಬ್ ಎದುರು ಗೆಲುವಿನ ನಗೆ ಬೀರಿತು.