ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್: ಕೆಎಸ್‌ಪಿಗೆ ಮಣಿದ ಮಂಡ್ಯ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡ ಇಲ್ಲಿ ನಡೆಯುತ್ತಿರುವ ಎನ್.ಸಿ. ಪರಪ್ಪ ಸ್ಮಾರಕ ಟ್ರೋಫಿ ರಾಜ್ಯ `ಎ~ ಡಿವಿಷನ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 70-48 ಪಾಯಿಂಟ್ಸ್‌ನಿಂದ ಮಂಡ್ಯದ ವಿಬಿಸಿ ತಂಡವನ್ನು ಮಣಿಸಿತು.

ಕಂಠೀರವ ಕ್ರೀಡಾಂಗಣದಲ್ಲಿಭಾನುವಾರ ನಡೆದ ಪಂದ್ಯದಲ್ಲಿ ವಿಜಯಿ ತಂಡ ವಿರಾಮದ ವೇಳೆಗೆ 34-23ರಲ್ಲಿ ಮುನ್ನಡೆ ಸಾಧಿಸಿತ್ತು. ಈ ತಂಡದ ಸನತ್ (14) ಹಾಗೂ ಮಹೇಶ್ (13) ಪಾಯಿಂಟ್ ಕಲೆ ಹಾಕಿದರು.
ಇತರ ಪಂದ್ಯಗಳಲ್ಲಿ ವಿಜಯ ಬ್ಯಾಂಕ್ 50-42ರಲ್ಲಿ ಕೋರಮಂಗಲ ಸ್ಪೋರ್ಟ್ಸ್ ಕ್ಲಬ್ ಮೇಲೂ, ಎಂಇಜಿ 69-66ರಲ್ಲಿ ಯಂಗ್ ಓರಿಯನ್ಸ್ ವಿರುದ್ಧವೂ, ಸಿಎಂಪಿ 69-65ರಲ್ಲಿ ಎಎಸ್‌ಸಿ ಮೇಲೂ ಜಯ ಸಾಧಿಸಿ ಪೂರ್ಣ ಪಾಯಿಂಟ್ಸ್ ಕಲೆಹಾಕಿತು.

ಭಾನುವಾರ ನಡೆದ  ಇನ್ನೊಂದು ಪಂದ್ಯದಲ್ಲಿ ಭಾರತ್ ಸ್ಪೋರ್ಟ್ಸ್ ಯೂನಿಯನ್ ಹಾಗೂ ಎಚ್‌ಎಎಲ್ ನಡುವಣ ಪಂದ್ಯದ ಪೂರ್ಣವಧಿ ವೇಳೆಗೆ 69-69ರಲ್ಲಿ ಸಮಬಲವಾಗಿತ್ತು. ನಂತರ ಹೆಚ್ಚುವರಿ ಸಮಯದಲ್ಲಿ          ಎಚ್‌ಎಎಲ್ ತಂಡ 76-69ರಲ್ಲಿ ಭಾರತ್ ಕ್ಲಬ್ ಎದುರು ಗೆಲುವಿನ ನಗೆ ಬೀರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT