ಜೋಧಪುರ್, (ಪಿಟಿಐ): ಪ್ರತಿಕೂಲ ಸಾಕ್ಷಿ ಹೇಳುವಂತೆ ಆಗ್ರಹಿಸಿ ಭನ್ವಾರಿ ದೇವಿ ಕೊಲೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆಗಳು ಬರುತ್ತಿವೆ, ಜೊತೆಗೆ ತಮಗೂ ಬೆದರಿಕೆಗಳು ಬರುತ್ತಿವೆ ಎಂದು ಪ್ರಕರಣದ ತನಿಖೆ ನಡೆಸುತ್ತಿದರುವ ಸಿಬಿಐ ಮಂಗಳವಾರ ರಾಜಸ್ಥಾನದ ಹೈಕೋರ್ಟ್ ಗಮನಕ್ಕೆ ತಂದಿದೆ.
ಭನ್ವಾರಿ ದೇವಿಯ ಪತಿ ಅಮರಚಂದ್ ಅವರು ದಾಖಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ಸಂದರ್ಭದಲ್ಲಿ, ಸಿಬಿಐ ಪರವಾಗಿ ಹಾಜರಾಗಿದ್ದ ವಕೀಲ ಪನ್ನೆ ಸಿಂಗ್ ಅವರು, ಹಲವಾರು ರಾಜಕಾರಣಿಗಳು ಭಾಗಿಯಾಗಿರುವ ಈ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐ ನಿಷ್ಪಕ್ಷಪಾತದಿಂದ ಮಾಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.