ಶ್ರೀಮತಿ ಪೂಜಾ ಗಾಂಧಿಯವರೇ! ನಿನ್ನೆ ಜೇಡಿಎಸ್ಸು,
ಇಂದು ಕೇಜೇಪಿ. ನಾಳೆ ಕಾಂಗ್ರೆಸ್ಸು!
ಏನ್ತಾಯಿ, ನಿಮ್ಮ ಅವತಾರ!
ಏನ್ತಾಯಿ, ನಿಮ್ಮ ಚಮತ್ಕಾರ!
ರಾಜಕೀಯದ ಓಂನಾಮ, ಓಂಕಾರಗಳನ್ನೆಲ್ಲಾ,
ಸಿನಿಮಾ- ಸಂಭಾಷಣೆಗಳಂತೆ, ಉರು ಹೊಡೆದುಬಿಟ್ಟಿರಲ್ಲಾ!
ಆಯನೂರು ಮಂಜುನಾಥ್ ನಿಮ್ಮನ್ನು ಅತ್ಯಂತ ಕೆಟ್ಟದಾಗಿ ಟೀಕಿಸಿದಾಗ, ಜೆಡಿಎಸ್ನ ಯಾವುದೇ ಹಿರಿಯ-ಕಿರಿಯ ನಾಯಕರು ನಿಮ್ಮ ಬೆಂಬಲಕ್ಕೆ ಬರಲಿಲ್ಲ, ನಿಜ; ಆದರೆ ಅದೇ ಆಯನೂರು ಮಂಜುನಾಥ್ರು, ನಿಮ್ಮ ನಾಯಕ ಯಡಿಯೂರಪ್ಪನವರ ಅತ್ಯಾಪ್ತರು! ಅಷ್ಟೇ ಅಲ್ಲ, ಬಿಜೆಪಿ-ಕೆಜೆಪಿಯ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರು!
ನಿಜ, ರಾಜಕೀಯದಲ್ಲಿ, ಯಾರೂ, ಶಾಶ್ವತ ಮಿತ್ರರುಗಳಲ್ಲ; ಯಾರೂ, ಶಾಶ್ವತ ಶತ್ರುಗಳೂ ಅಲ್ಲ.....!
ಈ ಸತ್ಯವನ್ನು ಇಷ್ಟು ಬೇಗ ತಿಳಿದುಕೊಂಡ ನೀವು, ನಿಜವಾಗಿಯೂ ಅತ್ಯಂತ ಜಾಣರು!