ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆ: ಬುಡ್ಗಜಂಗಮರ ಧರಣಿ ಅಂತ್ಯ

ಜಾತಿ ಪ್ರಮಾಣಪತ್ರ ವಿವಾದ
Last Updated 20 ಡಿಸೆಂಬರ್ 2013, 6:25 IST
ಅಕ್ಷರ ಗಾತ್ರ

ಕೋಲಾರ:  ಜಾತಿ ಪ್ರಮಾಣ ಪತ್ರ ನೀಡ­ಬೇಕು ಎಂದು ಆಗ್ರಹಿಸಿ ಧರಣಿ ನಡೆ­ಸುತ್ತಿದ್ದ ಬುಡ್ಗಜಂಗಮ ಸಮು­ದಾಯ­ದವರು ಜಿಲ್ಲಾಧಿಕಾರಿ ಡಿ.ಕೆ.ರವಿ ಅವರು ನೀಡಿದ ಭರವಸೆಯ ಮೇರೆಗೆ ಧರಣಿ ಬುಧವಾರ ಕೊನೆಗೊಳಿಸಿ­ದರು.

ಅದಕ್ಕೂ ಮುನ್ನ ಶಾಸಕರಾದ ಜಿಮಂಜುನಾಥ, ಕೆ.ಎಸ್.ಮಂಜುನಾಥ ಮತ್ತು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರು ಜಿಲ್ಲಾಧಿಕಾರಿ ಜತೆ ಸುದೀರ್ಘ ಚರ್ಚೆ ನಡೆಸಿದರು.  

ರಾಜ್ಯದಲ್ಲಿ ಎಲ್ಲೆಡೆ ಬುಡ್ಗಜಂಗ­ಮರಿಗೆ ಪ್ರಮಾಣಪತ್ರ ನೀಡುತ್ತಿರುವಾಗ ಕೋಲಾರ ಜಿಲ್ಲೆಯಲ್ಲಿ ಮಾತ್ರ ಪ್ರಮಾಣ­ಪತ್ರ ನೀಡದೆ ಸತಾಯಿಸ­ಲಾಗುತ್ತಿದೆ ಎಂದು ಶಾಸಕರು ಮತ್ತು ಮಾಜಿ ಸಚಿವೆ ತೀವ್ರ ಆಕ್ಷೇಪ ವ್ಯಕ್ತಪಡಿ­ಸಿದರು.

ಅನುಸಾರ ಸಮಗ್ರ ಪರಿಶೀಲನೆ ನಡೆಸಿ ವಾಸ್ತವದ ಆಧಾರದ ಮೇಲೆ ಕಾರ್ಯನಿರ್ವಹಿಸಬೇಕಾಗುತ್ತದೆ, ಒಂದೊಂದು ಪ್ರಕರಣವೂ ಭಿನ್ನತೆ ಇರುತ್ತದೆ ಹೀಗಿದ್ದಾಗ  ಏಕ ಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಆಗುವು­ದಿಲ್ಲ ಎಂದು ಜಿಲ್ಲಾಧಿಕಾರಿ ವಿವರಿಸಿ­ದರು. ತಾವು ಈಗಾಗಲೇ ನೀಡಿರುವ ಆದೇಶವನ್ನು ಬದಲಾಯಿಸಲು ಆಗು­ವು­ದಿಲ್ಲ.  ಸಂಬಂಧಿಸಿದ ಪ್ರಾಧಿಕಾರದ ವತಿಯಿಂದ ಬದಲಾವಣೆ ಸಾಧ್ಯ.

ಅವು­ಗಳನ್ನು ಹತಡಸಿ ಹೊಸ ಪ್ರಕರಣಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ರಾಜ್ಯ ಬುಡ್ಗ ಜಂಗಮ ಕ್ಷೇಮಾ­ಭಿವೃದ್ಧಿ ಸಂಘದ ಅಧ್ಯಕ್ಷ ಶೇಷಾದ್ರಿ, ಪರಿಶಿಷ್ಠ ಪಂಗಡಗಳ ಅಲೆಮಾರಿ ಬುಡಕಟ್ಟು ಮಹಾಸಭಾದ ಅಧ್ಯಕ್ಷ ಡಾ.ಬಾಲಗುರುಮೂರ್ತಿ, ಸಂಘ­ಟನೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.­ಕೃಷ್ಣಮೂರ್ತಿ, ವೆಂಕಟ­ರಾಮ್, ಗಂಗಾ­ಧರ್, ಹಾರೋಹಳ್ಳಿ ನಾರಾ­ಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT