ಏಕೆಂದರೆ ದೇಶದಲ್ಲಿ ಕಾಂಗ್ರೆಸ್ಸೇತರ ರಾಷ್ಟ್ರೀಯ ಪಕ್ಷ ಬಿಜೆಪಿ ಸ್ಥಾಪನೆಯು ಹೆಚ್ಚು ಕಡಿವೆು ಇದೇ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದಿತ್ತು. ಆದರೆ ಆದದ್ದೇ ಬೇರೆ.
ಕಾಂಗ್ರೆಸ್ ಪಕ್ಷದವರಿಗಿಂತ ಕಡಿಮೆಯೇನಿಲ್ಲ ಎನ್ನುವ ಮಟ್ಟಿಗೆ ಭ್ರಷ್ಟಾಚಾರ ಈ ಬಿಜೆಪಿ ಪಕ್ಷದ ಆಡಳಿತ ಸರ್ಕಾರದಲ್ಲಿ ಹಾಗೂ ಪಕ್ಷದವರಲ್ಲಿ ಕಾಣುತ್ತಿದ್ದೇವೆ.
ಆದರೂ ಅರವಿಂದ ಕೇಜ್ರಿವಾಲ್ ಅವರ ಪ್ರಾಮಾಣಿಕ ಹಾಗೂ ಕೆಚ್ಚೆದೆಯ ಹೋರಾಟ ಮತ್ತು ಅಣ್ಣಾ ಹಜಾರೆ ಸೇರಿದಂತೆ ಇತರ ಪ್ರಾಮಾಣಿಕ ವ್ಯಕ್ತಿಗಳ ಒಡನಾಟದೊಂದಿಗೆ ಮುನ್ನುಗ್ಗುತ್ತಿರುವ ಈ ಪಕ್ಷದಲ್ಲಿ ಏನೋ ಹೊಸತು ಕಾಣಬಹುದೆಂದು ಶ್ರೀಸಾಮಾನ್ಯನ ಮನಸ್ಸಿನಲ್ಲಿ ಭರವಸೆಯ ಬೆಳಕು ಮೂಡುತ್ತಿದೆ.