ಕಾರ್ಗಲ್: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಮಳೆಗೆ ಲಿಂಗನಮಕ್ಕಿ ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, ಒಳಹರಿವು ಹೆಚ್ಚುತ್ತಿರುವ ಕಾರಣ ಬುಧವಾರ 10 ಸಾವಿರ ಕ್ಯೂಸೆಕ್ ನೀರನ್ನು 5 ಕ್ರೆಸ್ಟ್ ಗೇಟ್ಗಳ ಮೂಲಕ ಹೊರ ಬಿಡಲಾಗಿದೆ.
ತೀರ್ಥಹಳ್ಳಿ, ಹೊಸನಗರ, ಮಾಸ್ತಿ ಕಟ್ಟೆ, ತುಮರಿ, ಬ್ಯಾಕೋಡು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಹೆಚ್ಚು ನೀರು ಹರಿದು ಬರುತ್ತಿದೆ. ನದಿ ತೀರದ ನಿವಾಸಿಗಳಿಗೆ ಈಗಾಗಲೇ ಜಾಗೃತರಾಗಿರುವಂತೆ ಎಚ್ಚರಿಕೆಯ ಸಂದೇಶ ಕಳುಹಿಸಲಾಗಿದೆ.
ಕೆಪಿಸಿಯ ಉನ್ನತ ಅಧಿಕಾರಿಗಳು, ಭದ್ರತಾ ವಿಭಾಗದ ಪ್ರತ್ಯೇಕ ತಂಡಗಳನ್ನು ನದಿ ತೀರದ ನಿವಾಸಿಗಳ ಸುರಕ್ಷತೆಗಾಗಿ ನಿಯೋಜನೆ ಮಾಡಲಾಗಿದೆ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ರಾಜಮುಡಿ ತಿಳಿಸಿದ್ದಾರೆ.