ಕೆಂಗೇರಿ: `ಪಕ್ಷದಲ್ಲಿ ಕಾರ್ಯಕರ್ತರು ನಿಷ್ಠೆ, ಪ್ರಾಮಾಣಿಕತೆಯಿಂದ ದುಡಿಯಬೇಕು. ಆಗ ಭವಿಷ್ಯದಲ್ಲಿ ಉತ್ತಮ ನಾಯಕರಾಗಲು ಸಾಧ್ಯವಾಗುತ್ತದೆ~ ಎಂದು ಜೆಡಿಎಸ್ ಮುಖಂಡ ಜವರಾಯಿಗೌಡ ತಿಳಿಸಿದರು.
ಮಾಗಡಿ ರಸ್ತೆಯ ಭಾರತ್ ನಗರದ ಆಟದ ಮೈದಾನದಲ್ಲಿ ಸೋಮವಾರ ನಡೆದ ಯಶವಂತಪುರ ಕ್ಷೇತ್ರದ ಹೇರೋಹಳ್ಳಿ ವಾರ್ಡಿನ ಜೆಡಿಎಸ್ ಸಮಾವೇಶದಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಬಿಬಿಎಂಪಿ ಸದಸ್ಯ ಎ.ಎಂ.ಹನುಮಂತೇಗೌಡ, ಲತಾ ಹನುಮಂತೇಗೌಡ, ಮುಖಂಡರಾದ ಗಂಗಣ್ಣ, ಜಯರಾಮಣ್ಣ, ಯಶೋದಾ ತಿಮ್ಮೇಗೌಡ, ಮಾರೇಗೌಡ ಉಪಸ್ಥಿತರಿದ್ದರು.