ಭಾನುವಾರ, 6.2.1961
‘ನಿಮ್ನ ವರ್ಗದ ಜನತೆಯಲ್ಲಿ ಆತ್ಮನಂಬಿಕೆ ಬೆಳೆಯಬೇಕು’
ಹೈದರಾಬಾದ್, ಫೆ. 5- ನಿಮ್ನ ವರ್ಗದವರು ಮತ್ತು ಗಿರಿಜನರು ಶಕ್ತಿ ಹಾಗೂ ಆತ್ಮನಂಬಿಕೆಯ ಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ಪ್ರಧಾನಮಂತ್ರಿ ನೆಹರು ಅವರು ಇಂದು ಇಲ್ಲಿ ಸಲಹೆ ನೀಡಿದರು.
ನಿಮ್ನ ವರ್ಗದವರ ಮತ್ತು ಗಿರಿಜನರ ಅಖಿಲಭಾರತ ಶಾಸಕರ ಸಮ್ಮೇಳನವನ್ನು ಸಿಕಂದರಾಬಾದ್ ಪೆರೇಡ್ ಮೈದಾನದಲ್ಲಿ ಉದ್ಘಾಟಿಸಿದರು. ದೇಶದಾದ್ಯಂತ ಒಟ್ಟು 784 ಮಂದಿ ಶಾಸಕರ ಪೈಕಿ 250 ಮಂದಿ ಸದಸ್ಯರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಕೇಂದ್ರದ ರೈಲ್ವೆ ಮಂತ್ರಿ ಶ್ರೀ ಜಗಜೀವನರಾಂ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.