‘ಆರ್ಟ್ ಅಫೇರ್ಸ್ ಬೈ ಮರ್ಜಿಂಗ್ ಫ್ಲೂಸ್’ ಹೆಸರಿನ ಚಿತ್ರಕಲಾ ಪ್ರದರ್ಶನದಲ್ಲಿ ತೈಲ ಚಿತ್ರ, ಜಲಚಿತ್ರ, ಆ್ಯಕ್ರಿಲಿಕ್ ಆನ್ ಕ್ಯಾನ್ವಾಸ್, ಇಂಕ್ ಆನ್ ಪೇಪರ್ ಕಲಾಕೃತಿಗಳು ಗಮನ ಸೆಳೆಯುತ್ತವೆ.ಆಯಾ ಋತುಮಾನಗಳಲ್ಲಿ ಬೆಂಗಳೂರಿನ ರಸ್ತೆಬದಿ ಅರಳುವ ವಿವಿಧ ಪ್ರಕಾರದ ಹೂಗಳು, ಮೈಮರೆತು ಕುಣಿಯುವ ನವಿಲು ಹಾಗೂ ಅದರ ಸೌಂದರ್ಯ, ಬುದ್ಧನ ಧ್ಯಾನಮಗ್ನ ಭಂಗಿ, ಗ್ರಹಗಳು, ಮಹಾನಗರಕ್ಕೆ ಮೊದಲ ಸಲ ಬಂದಾಗ ಉಂಟಾಗುವ ಅನುಭವವನ್ನು ಭಾರತೀಯ ಕಲಾವಿದರಾದ ಜಿ.ಎಸ್. ಶ್ರೀ ವಿದ್ಯಾ, ಶಾಹುಲ್ ಕೊಲೆನ್ಗೊಡೆ, ಅಂಬರೀಷ್ ಮಾಳವಂಕರ್, ಸಂಜಯ್ ಶರ್ಮಾ ಮತ್ತು ಡಾ. ಅಮೀತ್ ರಾಜವಂಶಿ ಅವರ ಕಲಾಕೃತಿಗಳಲ್ಲಿ ನೋಡಬಹುದು.