ನವದೆಹಲಿ (ಪಿಟಿಐ): ಭಾರತ ಈ ಸಲದ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಯನ್ನು ಗೆಲ್ಲಲಿದೆ ಎನ್ನುವ ವಿಶ್ವಾಸವನ್ನು ಪ್ರಧಾನಿ ಡಾ.ಮನಮೋಹನ್ ಸಿಂಗ್ ವ್ಯಕ್ತಪಡಿಸಿದ್ದಾರೆ.
‘ಭಾರತ ಉತ್ತಮ ಆಟಗಾರರನ್ನು ಒಳಗೊಂಡ ಬಲಿಷ್ಠ ತಂಡವಾಗಿದೆ.ಈ ಸಲದ ವಿಶ್ವಕಪ್ನಲ್ಲಿ ಪ್ರಶಸ್ತಿ ಪಡೆಯುತ್ತದೆ ಎನ್ನುವ ವಿಶ್ವಾಸ ನನ್ನದು. ಹಾಗೆಯೇ ಭಾರತ ಚಾಂಪಿಯನ್ ಆಗಬೇಕು ಎನ್ನುವ ಆಶಯವು ನನ್ನದಾಗಿದೆ’ ಎಂದು ಟಿವಿ ಸಂಪಾದಕರ ಜೊತೆ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಸಿಂಗ್ ಹೇಳಿದರು.
ಭಾರತ ಕ್ರಿಕೆಟ್ ತಂಡದಲ್ಲಿ ನಿಮ್ಮ ನೆಚ್ಚಿನ ಆಟಗಾರ ಯಾರು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮನಮೋಹನ್ ಸಿಂಗ್ ‘ಕೆಲ ಆಟಗಾರರು ನನಗೆ ಇಷ್ಟ’ ಎಂದು ಹೇಳಿದರೇ ಹೊರೆತು, ಯಾರೊಬ್ಬರು ಹೆಸರನ್ನು ಹೇಳಿಲಿಲ್ಲ.