ಲಂಡನ್ (ಪಿಟಿಐ): `ನಾನು ಭಾರತಕ್ಕೆ ಮರಳಲು ಸಿದ್ಧ. ಆದರೆ, ಯಾವುದೇ ಕಾರಣವಿಲ್ಲದೇ ನನ್ನನ್ನು ಬಲಿಪಶು ಮಾಡಲಾಗುತ್ತದೆ~ ಎಂದು ಮುಂಬೈ ಸ್ಫೋಟಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರಕ್ಕೆ ಬೇಕಾಗಿರುವ ಇಕ್ಬಾಲ್ ಮೆಮನ್ ಅಲಿಯಾಸ್ ಮಿರ್ಚಿ ತಿಳಿಸಿದ್ದಾನೆ.
ಸಹೋದರನನ್ನು ಕೊಲೆಗೈಯುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧಿತನಾಗಿ ಆನಂತರ ಜಾಮೀನಿನ ಮೇಲೆ ಹೊರಬಂದಿರುವ ಮಿರ್ಚಿ, ತನ್ನ ವಕೀಲ ಅಫಶೀನ್ ಚೌಧರಿ ಮೂಲಕ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾನೆ.
`ಭಯೋತ್ಪಾದಕ ಚಟುವಟಿಕೆ, ಭೂಗತ ಲೋಕದೊಂದಿಗೆ ಯಾವುದೇ ನಂಟು ಹೊಂದಿಲ್ಲ~ ಎಂದಿದ್ದಾನೆ.