ನವದೆಹಲಿ (ಪಿಟಿಐ): ಚೀನಾ ಪಡೆ ವಾರದ ಹಿಂದೆ ಲಡಾಕ್ನ ಚುಮರ್ ಪ್ರದೇಶದಲ್ಲಿ ವಾಸ್ತವ ಗಡಿ ರೇಖೆ ಬಳಿ ಭಾರತದ ಐವರು ಪ್ರಜೆಗ-ಳನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ವಾರ ಚೀನಾ ಪಡೆ, ಚುಮರ್ನಲ್ಲಿ ಭಾರತಕ್ಕೆ ಸೇರಿದ ಭೂಪ್ರದೇಶದಲ್ಲಿ ಈ ಐವರನ್ನು ಜಾನುವಾರು ಸಮೇತ ವಶಕ್ಕೆ ಪಡೆದುಕೊಂಡಿತ್ತು. ನಂತರ ಉಭಯ ದೇಶಗಳ ಸೇನಾಧಿ ಕಾರಿಗಳ ಸಭೆ ಬಳಿಕ ಇವರನ್ನು ಬಿಡುಗಡೆ ಮಾಡಿತು.
ಇದನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲಾಗಿದೆ ಎಂದು ಸೇನೆ ಹೇಳಿದೆ. ಮೊದಲು ವರದಿಯಾದಂತೆ ಇವರು ಭಾರತದ ಸೇನೆಗೆ ಸೇರಿದ ಕೂಲಿಯಾಳುಗಳಲ್ಲ, ನಾಗರಿಕರು ಎಂದು ಸೇನೆ ಸ್ಪಷ್ಟಪಡಿಸಿದೆ.