ಎರಡೂ ದೇಶಗಳ ಜನರು ಮತ್ತು ಪ್ರಾದೇಶಿಕ ಶಾಂತಿ ಹಾಗೂ ಸಮೃದ್ಧಿಗಾಗಿ ಭಾರತದೊಂದಿಗೆ ಸ್ನೇಹ ಮತ್ತು ಸಹಕಾರ ಸಂಬಂಧ ಹೊಂದಲು ಪಾಕ್ ಬಯಸುತ್ತಿದೆ ಎಂದು ಶಾಬಾಜ್ ಶರೀಫ್ ಈ ಸಂದರ್ಭದಲ್ಲಿ ಹೇಳಿದರು.
ಸೆಪ್ಟೆಂಬರ್ನಲ್ಲಿ ನ್ಯೂಯಾರ್ಕ್ನಲ್ಲಿ ನಡೆದ ನವಾಜ್ ಶರೀಫ್ ಜತೆಗಿನ ಸಭೆಯಲ್ಲಿ ನಿರೀಕ್ಷಿತ ಫಲಿತಾಂಶ ಸಾಧ್ಯವಾಗಿಲ್ಲ ಎಂದು ಪ್ರಧಾನಿ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದರು. ಶಾಬಾಜ್ ಶರೀಫ್ ಪಾಕ್ ಆಡಳಿತಾರೂಢ ಪಾಕಿಸ್ತಾನ್ ಮುಸ್ಲಿಂ ಲೀಗ್ನ ಎರಡನೇ ಪ್ರಮುಖ ನಾಯಕ. ಹಾಗಾಗಿ ಅವರ ಪ್ರಧಾನಿ ಭೇಟಿ ಮತ್ತು ಹೇಳಿಕೆ ಮಹತ್ವ ಪಡೆದುಕೊಂಡಿದೆ.